ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕಾಣೆಯಾಗಿದ್ದ 100 ಕ್ಕೂ ಅಧಿಕ ಗ್ರಾಂ ಚಿನ್ನ ಪತ್ತೆ| Gold

Thiruvananthapuram: ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಭದ್ರತಾ ಕೊಠಡಿಯಿಂದ 100 ಗ್ರಾಂ ಗೂ ಹೆಚ್ಚು ಚಿನ್ನ ಕಳವು ಆಗಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು.
ಇದೀಗ ದೇವಸ್ಥಾನದಿಂದ ಕಾಣೆಯಾದ ಚಿನ್ನ ಇಂದು (11) ಸಂಜೆ ಪತ್ತೆಯಾಗಿದೆ. ಪೊಲೀಸರು ತಪಾಸಣೆ ನಡೆಸಿದಾಗ ಕಾಣೆಯಾದ 13 ಪೌಂಡ್​ಗೂ ಹೆಚ್ಚಿನ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದೆ. ದೇವಸ್ಥಾನದ ಬಾಗಿಲಿಗೆ ಚಿನ್ನ ಲೇಪಿಸಲು ಬಳಸಲಾಗುತ್ತಿದ್ದ ಚಿನ್ನದ ತಂತಿ ನಿನ್ನೆ ಕಾಣೆಯಾಗಿದೆ.

ಇದನ್ನೂ ಓದಿ: ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೂ ಆಪರೇಷನ್ ಸಿಂಧೂರ್ ಮುಂದುವರಿಯುತ್ತದೆ; ಮೋದಿ ಖಡಕ್​ ಎಚ್ಚರಿಕೆ| Modi

2 ದಿನಗಳ ಹಿಂದೆ ಕೊನೆಯ ಬಾರಿಗೆ ಚಿನ್ನದ ಲೇಪನ ಕೆಲಸವನ್ನು ಮಾಡಲಾಗಿತ್ತು. ನಂತರ ಉಳಿದ ಚಿನ್ನವನ್ನು ಲಾಕರ್‌ನಲ್ಲಿ ಭದ್ರಪಡಿಸಲಾಗಿತ್ತು. ಆದರೆ ಕೆಲಸಕ್ಕಾಗಿ ಮತ್ತೆ ಚಿನ್ನವನ್ನು ಲಾಕರ್‌ನಿಂದ ಹೊರತೆಗೆದಾಗ, ಸುಮಾರು 100 ಗ್ರಾಂಗೂ ಹೆಚ್ಚಿನ ಚಿನ್ನ ಕಾಣೆಯಾಗಿರುವುದು ಕಂಡುಬಂದಿದೆ. ಬಳಿಕ ದೇವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದರು.

ಇದನ್ನೂ ಓದಿ: ಭಾರತ-ಪಾಕ್ ಕದನ; ‘ಆಪರೇಷನ್ ಸಿಂಧೂರ್‌’ ಯಶಸ್ವಿ ಕಾರ್ಯ ಮುಂದುವರೆದಿದೆ ಎಂದು ವಾಯುಪಡೆ ಪೋಸ್ಟ್| Air Force

ದೇವಾಲಯದಲ್ಲಿ ಚಿನ್ನದ ಲೇಪನ ಕೆಲಸಕ್ಕಾಗಿ ಇರಿಸಲಾಗಿದ್ದ ಸುಮಾರು 100 ಗ್ರಾಂ ಗೂ ಹೆಚ್ಚು ಚಿನ್ನ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಚಿನ್ನ ಕದ್ದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗಿತ್ತು.
ಚಿನ್ನವನ್ನು ಹುಡುಕಲು ಇಂದು ಬೆಳಗ್ಗೆಯಿಂದ ದೇವಾಲಯದ ಆವರಣದಲ್ಲಿ ಪೊಲೀಸ್ ತಂಡ ವಿಶೇಷ ಶೋಧ ನಡೆಸಿದ್ದು, ಆ ಹುಡುಕಾಟದ ಸಮಯದಲ್ಲಿ ಕಳೆದುಹೋದ ಚಿನ್ನವು ದೇವಾಲಯದ ಆವರಣದ ಮಣ್ಣಿನಲ್ಲಿ ಕಂಡುಬಂದಿದೆ.
(ಏಜೆನ್ಸೀಸ್)

ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೂ ಆಪರೇಷನ್ ಸಿಂಧೂರ್ ಮುಂದುವರಿಯುತ್ತದೆ; ಮೋದಿ ಖಡಕ್​ ಎಚ್ಚರಿಕೆ| Modi

ಭವಿಷ್ಯದ ಯಾವುದೇ ವಿಷಯದ ಬಗ್ಗೆ ಭಾರತದೊಂದಿಗೆ ಚರ್ಚಿಸಬಹುದು; ಪಾಕ್ ರಕ್ಷಣಾ ಸಚಿವ| Khawaja Asif

Share This Article

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…