More

    ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ಬೆಂಗಳೂರು: ‘ಉಂಡೂ ಹೋದ ಕೊಂಡೂ ಹೋದ’ ಚಿತ್ರದಲ್ಲಿ ನಟ ಅನಂತ್​ನಾಗ್ ಅಭಿನಯಿಸಿದ್ದ ಕೌ ಇನ್​ಸ್ಪೆಕ್ಟರ್ ಪಾತ್ರವನ್ನು ಈ ಝಾನ್ಸಿ ನೆನಪಿಸಿದರೂ ಅಚ್ಚರಿ ಏನಿಲ್ಲ. ಏಕೆಂದರೆ ಅಲ್ಲಿನ ಆ ಪಾತ್ರವೇ ಅಂಥದ್ದು. ಅದನ್ನೇ ಹೋಲುವಂತೆ ಈಕೆ ರೈತರೊಬ್ಬರಿಗೆ ದನದ ಸಾಲದ ಹೆಸರಲ್ಲಿ ಮೋಸ ಮಾಡಿದ್ದಾಳೆ.

    ದನದ ಸಾಲ ಕೊಡಿಸುವುದಾಗಿ ರೈತರೊಬ್ಬರಿಂದ ಖಾತೆ ವಿವರ ಪಡೆದು ಅಕ್ರಮ ವಹಿವಾಟು ನಡೆಸಿರುವ ಈಕೆ ಇದೀಗ ಆ ಕೃಷಿಕರನ್ನು ಫಜೀತಿಗೆ ಸಿಲುಕಿಸಿದ್ದಾಳೆ. ಈಕೆ ಮಾಡಿರುವ ಕಿತಾಪತಿಗೆ ಈ ರೈತರಿಗೆ 40 ಲಕ್ಷ ರೂ. ತೆರಿಗೆ ಕಟ್ಟುವಂತೆ ನೋಟಿಸ್ ಬಂದಿದೆ.

    ಇದನ್ನೂ ಓದಿ: ನಟಿ ರಚಿತಾ ರಾಮ್​ ಮುಖದಲ್ಲೀಗ ಮತ್ತೆ ಖುಷಿಯ ಡಿಂಪಲ್​; ಬೇಸರದ ಮಧ್ಯೆಯೇ ‘ಏಕ್​ಲವ್​​ಯಾ’ಗೂ ಸಂತೋಷ!

    ಬೆಂಗಳೂರಿನ ಯಲಹಂಕ ತಾಲೂಕು ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜು ಎಂಬವರು ಮೋಸ ಹೋದವರು. ಹಸು ಖರೀದಿಗೆಂದು ಮುಂದಾಗಿದ್ದ ಮುನಿರಾಜು ಅವರಿಗೆ ತಮ್ಮ ಕುಟುಂಬಕ್ಕೆ ಪರಿಚಿತವಾಗಿರುವ ಝಾನ್ಸಿ ಎಂಬಾಕೆ ತಾನು ಸರ್ಕಾರದಿಂದ ಹಸು ಕೊಳ್ಳಲು ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಮಾತ್ರವಲ್ಲ ಅದಕ್ಕೆ ಮುನಿರಾಜು ಮತ್ತು ಅವರ ಹೆಂಡತಿಯ ಬ್ಯಾಂಕ್ ಖಾತೆ, ಪಾಸ್​ಬುಕ್​, ಆಧಾರ್ ವಿವರ ಇತ್ಯಾದಿ ಪಡೆದಿದ್ದರು. ಕೆಲವು ದಿನಗಳ ಬಳಿಕ ಒಂದು ಒಟಿಪಿ ಬರುತ್ತೆ, ಅದನ್ನು ಹೇಳಿದರೆ ಸಾಕು ಎಂದಿದ್ದರು.

    ಇದನ್ನೂ ಓದಿ: ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ…

    ಆಕೆ ಹೇಳಿದ್ದಂತೆ ಆಗಸ್ಟ್ 20ರಂದು ಒಟಿಪಿ ಬಂದಿದ್ದು, ಮುನಿರಾಜು ಅವರು ಅದನ್ನು ಹೇಳಿದ್ದರು. ಅ. 12ರಂದು ಮುನಿರಾಜುವನ್ನು ಸಂಪರ್ಕಿಸಿದ ತೆರಿಗೆ ಅಧಿಕಾರಿಗಳು ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದ್ದು, ಅದಕ್ಕಾಗಿ 40 ಲಕ್ಷ ರೂ. ತೆರಿಗೆ ಕಟ್ಟಬೇಕು ಎಂದು ನೋಟಿಸ್ ಕೊಟ್ಟಿದ್ದರು. ಆಗಲೇ ಮುನಿರಾಜು ಅವರಿಗೆ ಮೋಸ ಹೋಗಿದ್ದು ಗೊತ್ತಾಗಿದ್ದು, ಈ ಕುರಿತು ಬಾಗಲೂರು ಠಾಣೆಗೆ ದೂರು ನೀಡಿದ್ದಾರೆ.

    ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts