ಬೆಂಗಳೂರು: ನಟಿ ರಚಿತಾ ರಾಮ್ ಕಳೆದೆರಡು ದಿನಗಳಿಂದ ಟ್ರೋಲ್ಗೆ ಒಳಗಾಗಿದ್ದಾರೆ, ಟೀಕೆಗೂ ತುತ್ತಾಗಿದ್ದಾರೆ. ಅದು ‘ಲವ್ ಯೂ ರಚ್ಚು’ ಸಿನಿಮಾದಲ್ಲಿನ ಹಾಡಿನಲ್ಲಿ ಮಾದಕ ದೃಶ್ಯದಲ್ಲಿ ಅಭಿನಯಿಸಿದ್ದಕ್ಕೆ ಸಮರ್ಥನೆಯಾಗಿ ಫಸ್ಟ್ ನೈಟ್ ಉದಾಹರಣೆ ಕೊಟ್ಟಿದ್ದ ಅವರ ಹೇಳಿಕೆ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದೂ ಆಗಿದೆ. ಸಾಲದ್ದಕ್ಕೆ ಇಂದು ಮತ್ತೆ ಅವರೊಂದಿಗೆ ನಿರ್ದೇಶಕ ಪ್ರೇಮ್, ನಟಿ-ನಿರ್ಮಾಪಕಿ ರಕ್ಷಿತಾ ಕೂಡ ಟ್ರೋಲ್ ಆಗಿದ್ದರು, ಟೀಕೆಗೊಳಗಾಗಿದ್ದರು. ಹೀಗಾಗಿ ರಚಿತಾ ಮಾತ್ರವಲ್ಲದೆ ‘ಏಕ್ಲವ್ಯಾ’ ಚಿತ್ರತಂಡ ಬೇಸರಕ್ಕೆ ಒಳಗಾಗಿದ್ದರೂ, ಈಗ ಅವರೆಲ್ಲರ ಮುಖದಲ್ಲಿ ನಗುವೊಂದು ಮೂಡಿದೆ.
ಇದನ್ನೂ ಓದಿ: ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?
ರಕ್ಷಿತಾ ನಿರ್ಮಾಣ, ಪ್ರೇಮ್ ನಿರ್ದೇಶನ, ರಕ್ಷಿತಾ ಸೋದರ ರಾಣಾ, ರಚಿತಾ ರಾಮ್ ಮತ್ತು ರೀಷ್ಮಾ ಅಭಿನಯಿಸಿರುವ ‘ಏಕ್ಲವ್ಯಾ’ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ’ ಎಂಬ ಹಾಡೊಂದನ್ನು ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿತ್ತು. ಪ್ರೇಮ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ಮಂಗ್ಲಿ ಮತ್ತು ಕೈಲಾಶ್ ಖೇರ್ ಗಾಯನದ ಈ ಹಾಡನ್ನು ಸಾಹಿತ್ಯಕ್ಕೆ ತಕ್ಕಂತೆ ಸ್ವಲ್ಪ ಜೋಶ್ನಲ್ಲೇ ನಿನ್ನೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಜಗಮೆಚ್ಚಿದ ‘ಪುನೀತ್’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!
ಈ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಇಟ್ಟು ಚಿತ್ರತಂಡದಿಂದ ಶ್ರದ್ಧಾಂಜಲಿಯನ್ನೂ ಸಲ್ಲಿಸಲಾಗಿತ್ತು. ಆದರೆ ಹಾಡು ಬಿಡುಗಡೆ ಸಂದರ್ಭದಲ್ಲಿ ಶಾಂಪೇನ್ ಬಳಲಾಗಿದೆ, ಅಲ್ಲಿಯೇ ಅಪ್ಪು ಫೋಟೋ ಇತ್ತು, ಇದರಿಂದ ಪುನೀತ್ಗೆ ಅವಮಾನ ಆಗಿದೆ ಎಂದು ಒಂದಷ್ಟ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದೇ ದೊಡ್ಡ ಸುದ್ದಿ ಆಗುತ್ತಿದ್ದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ ರಾಮ್ ಮೂವರೂ ಅದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಹಾಡಿನ ಸನ್ನಿವೇಶಕ್ಕೆ ತಕ್ಕಂತೆ ಅದನ್ನು ಬಳಸಲಾಗಿದೆ ಎಂದು ಹೇಳಿ ಕ್ಷಮೆಯನ್ನೂ ಕೋರಿದ್ದರು.
ಇದನ್ನೂ ಓದಿ: ಅಪ್ಪುಗೆ ಅವಮಾನ.. ರಚಿತಾ ರಾಮ್ ಕ್ಷಮೆಯಾಚಿಸಿದ್ರೂ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ತರಾಟೆ
ಹಾಡಿನ ಬಿಡುಗಡೆ ಸಂದರ್ಭದಲ್ಲಿ ನಡೆದ ಒಂದು ಅಚಾತುರ್ಯದಿಂದ ಉಂಟಾದ ಸಮಸ್ಯೆಯಿಂದ ವ್ಯಕ್ತವಾದ ವಿರೋಧ-ಅಸಮಾಧಾನದಿಂದಾಗಿ ‘ಏಕ್ಲವ್ಯಾ’ ಚಿತ್ರತಂಡ ಬೇಸರಕ್ಕೆ ಒಳಗಾಗಿತ್ತು. ಇದೀಗ ಅವರೆಲ್ಲರ ಮುಖದಲ್ಲಿ ಅದೇ ಹಾಡು ನಗು ಮೂಡಿಸುವಂತೆ ಮಾಡಿದೆ. ಅಂದರೆ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 26 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದಲ್ಲದೆ, ಈಗ ಯೂಟ್ಯೂಬ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿದೆ.
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್
ಈತನ ಹುಟ್ಟೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!