ಬೆಂಗಳೂರು: ‘ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ?’
– ಹೀಗಂತ ಒಂದೇ ಗುಕ್ಕಿನಲ್ಲಿ ಓದಿದರೆ ಒಂದು ಕುತೂಹಲಕಾರಿ ಪ್ರಶ್ನೆ ಆಗುವುದೇನೋ ನಿಜ. ಆದರೆ ಇದನ್ನು ಸ್ವಲ್ಪ ಬಿಡಿಸಿ ನೋಡಿದರೆ ಇದರಲ್ಲೇ ನಾಲ್ಕು ಹಾಡುಗಳಿವೆ. ಹೌದು.. ಇವತ್ತು ಸ್ಯಾಂಡಲ್ವುಡ್ನಲ್ಲಿ ಒಂದು ರೀತಿಯಲ್ಲಿ ಸಂಗೀತ ಸಂಭ್ರಮ ಎಂದರೂ ತಪ್ಪೇನಲ್ಲ. ಏಕೆಂದರೆ ಇವತ್ತೊಂದೇ ದಿನ ಒಟ್ಟು ನಾಲ್ಕು ಸಿನಿಮಾಗಳ ಹಾಡುಗಳು ಬಿಡುಗಡೆ ಆಗಿವೆ.
ಲಹರಿ ನಿರ್ಮಾಣ, ವಿಜಯಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಕುಮಾರ್-ಕಶ್ಮೀರ ಪರ್ದೇಶಿ ಅಭಿನಯಿಸಿರುವ ‘ರೈಡರ್’ ಸಿನಿಮಾದ ‘ಮೆಲ್ಲನೆ..’ ಹಾಡು ಇಂದು ಬಿಡುಗಡೆ ಆಗಿದೆ. ಕವಿರಾಜ್ ಸಾಹಿತ್ಯದ ಈ ಗೀತೆಗೆ ಅರ್ಜುನ್ ಸಂಗೀತ ಸಂಯೋಜಿಸಿದ್ದು, ಸಂಚಿತ್ ಹೆಗಡೆ ಗಾಯನವಿದೆ.
ರಕ್ಷಾ ವಿಜಯಕುಮಾರ್ ನಿರ್ಮಾಣ, ಭರತ್ ನಾವುಂದ ನಿರ್ದೇಶನದಲ್ಲಿ ಮನುರಂಜನ್ ರವಿಚಂದ್ರನ್-ಕಯಾದು ಲೋಹರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಮುಗಿಲ್ ಪೇಟೆ’ ಚಿತ್ರದ ‘ದೂರ ಹೋಗೋ ಮುನ್ನ’ ಗೀತೆ ಕೂಡ ಇಂದೇ ಬಿಡುಗಡೆ ಆಗಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯ ಈ ಗೀತೆಯನ್ನು ವಾಸುಕಿ ವೈಭವ್ ಹಾಡಿದ್ದಾರೆ.
ಕೆ.ಕೆ.ಅಶ್ರಫ್ ನಿರ್ಮಾಣ, ಎಚ್.ಬಿ. ಸಿದ್ದು ನಿರ್ದೇಶದನಲ್ಲಿ ನಿರಂಜನ್ ಸುಧೀಂದ್ರ- ರಾಧ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ನಮ್ಮ ಹುಡುಗರು’ ಸಿನಿಮಾದ ‘ಖುಷಿಯಲಿ ನಶೆಯಲಿ’ ಹಾಡು ಇಂದು ಬಿಡುಗಡೆ ಆಗಿದೆ. ಗೌಸ್ ಪೀರ್ ಸಾಹಿತ್ಯ, ಅಭಿಮಾನ್ ರಾಯ್ ಸಂಗೀತ ಈ ಗೀತೆಯನ್ನು ರಾಜೇಶ್ ಕೃಷ್ಣನ್ ಹಾಡಿದ್ದಾರೆ.
ರಕ್ಷಿತಾ ನಿರ್ಮಾಣ, ಪ್ರೇಮ್ ನಿರ್ದೇಶನದಲ್ಲಿ ರಾಣಾ, ರಚಿತಾ ರಾಮ್ ಹಾಗೂ ರೀಷ್ಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಏಕ್ಲವ್ಯಾ’ ಸಿನಿಮಾ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ’ ಗೀತೆಯೂ ಇವತ್ತೇ ಬಿಡುಗಡೆ ಆಗಿದೆ. ಪ್ರೇಮ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತದ ಈ ಗೀತೆಯನ್ನು ಮಂಗ್ಲಿ ಮತ್ತು ಕೈಲಾಶ್ ಖೇರ್ ಹಾಡಿದ್ದಾರೆ.
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್
ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ