ಬೆಂಗಳೂರು: ಸ್ಟಾರ್ ಹೋಟೆಲ್ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಈಗಾಗಲೇ ಒಂದು ಪ್ರಕರಣದ ಆರೋಪ ಹೊತ್ತಿದ್ದ ವ್ಯಕ್ತಿಯೇ ಇಂತಹ ವಂಚನೆ ಮಾಡಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಮದುವೆಯಾದ ತಿಂಗಳಲ್ಲೇ ರೈಲಿನಿಂದ ಪತ್ನಿಯ ನೂಕಿ ಕೊಲೆ- ಮುಂಬೈನಲ್ಲಿ ಅಮಾನುಷ ಘಟನೆ
ಸ್ವರೂಪ್ ಹೆಸರಿನ ಆರೋಪಿ ಸ್ಟಾರ್ ಹೋಟೆಲ್ನಲ್ಲಿ ಕಿರಣ್ ಹೆಸರಿನ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುತ್ತಾನೆ. ನಂತರ ತಾನೊಂದು ಎಂಎನ್ಸಿ ಕಂಪೆನಿ ಸಿಇಓ ಎಂದು ಹೇಳಿಕೊಳ್ಳುತ್ತಾನೆ. ಕಿರಣ್ನ ತಮ್ಮನಿಗೆ ಮೆರಿಡಿಯನ್ ಪ್ರೈಟ್ ಫಾರ್ವಡರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆದರೆ ತಾನೊಬ್ಬ ಸ್ನೇಹಿತನಿಗೆ ಹಣ ಕೊಡುವುದಾಗಿ ಹೇಳಿದ್ದು, ಇದೀಗ ತನ್ನ ಬ್ಯಾಂಕ್ ಖಾತೆಗಳು ಐಟಿ ರೇಡ್ನಿಂದಾಗಿ ಫ್ರೀಜ್ ಆಗಿರುವುದಾಗಿ ತಿಳಿಸುತ್ತಾನೆ. ನೀನು ನನ್ನ ಸ್ನೇಹಿತನ ಖಾತೆಗೆ 2.4 ಲಕ್ಷ ರೂಪಾಯಿ ಹಾಕು ಎಂದು ಹಾಕಿಸಿಕೊಂಡಿದ್ದಾನೆ.
ಇದಾದ ನಂತರ ಮತ್ತೊಮ್ಮೆ ಕಿರಣ್ನನ್ನು ಸಂಪರ್ಕಿಸಿದ ಸ್ವರೂಪ್ ಮತ್ತೊಮ್ಮೆ 2.3 ಲಕ್ಷ ರೂಪಾಯಿಯನ್ನು ಅಕೌಂಟ್ಗೆ ಹಾಕಿಸಿಕೊಂಡಿದ್ದಾನೆ. ಅದಾದ ಮೇಲೆ ಕಾಡುಗೋಡಿ ಬಸ್ ನಿಲ್ದಾಣದ ಬಳಿ 9 ಲಕ್ಷ ನಗದನ್ನು ಪಡೆದಿದ್ದಾನೆ. ನನ್ನ ತಂದೆಗೆ ಹಾರ್ಟ್ ಅಟ್ಯಾಕ್, ಅರ್ಜೆಂಟಾಗಿ ಹಣ ಬೇಕು ಎಂದು 15 ಲಕ್ಷ ಪೀಕಿದ್ದಾನೆ. ಇದೇ ರೀತಿ ಒಟ್ಟು 28.70 ಲಕ್ಷ ಹಣವನ್ನು ಕಿರಣ್ನಿಂದ ಪಡೆದುಕೊಂಡಿದ್ದಾನೆ. ಹಣ ಕೊಡದಿದ್ದರೆ ಕೆಲಸ ಕೊಡಿಸುವುದಿಲ್ಲ ಎಂದು ಬ್ಲಾಕ್ಮೇಲ್ ಮಾಡಿ ಹಣ ಪಡೆಯುತ್ತಿದ್ದ.
ಇದನ್ನೂ ಓದಿ: ‘ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿ ಸೇರ್ಪಡೆ’ ಟಿಎಂಸಿಗೆ ಸವಾಲೆಸೆದ ಬಿಜೆಪಿ ನಾಯಕ
ಇಷ್ಟೆಲ್ಲ ಹಣ ಕೊಟ್ಟ ಮೇಲೂ ಕೆಲಸ ಕೊಡಿಸುವುದು ಖಾತ್ರಿಯಾಗದ ಹಿನ್ನೆಲೆಯಲ್ಲಿ ಕಿರಣ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಇದೀಗ ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ ಈ ಹಿಂದೆ ಹಾವೇರಿ ಮೂಲದ ಅರ್ಷದ್ ಎಂಬ ಹುಡುಗನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು 48 ಲಕ್ಷ ಪಡೆದಿದ್ದ ಎನ್ನುವ ಆರೋಪವಿದೆ. ಅದೇ ಪ್ರಕರಣದಲ್ಲಿ ಕಾಡುಗೋಡಿ ಪೊಲೀಸರು ಈ ಹಿಂದೆಯೇ ಆತನನ್ನು ಬಂಧಿಸಿದ್ದರು. (ದಿಗ್ವಿಜಯ ನ್ಯೂಸ್)
ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?
ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!