blank

ಕೆ.ಎಲ್​. ರಾಹುಲ್​ ಈ ಕ್ರಮಾಂಕದಲ್ಲಿ ಆಡುವುದೇ ಸೂಕ್ತ; ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಕೆವಿನ್ ಪೀಟರ್ಸನ್ ಸಲಹೆ | KL Rahul

blank

KL Rahul: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್​ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಎರಡೂ ಸರಣಿಯನ್ನು ಗೆದ್ದು ಬೀಗಿದ ಟೀಮ್ ಇಂಡಿಯಾಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ, ಅಭಿನಂದನೆಗಳು ಹರಿದುಬಂದಿತು. ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್​. ರಾಹುಲ್ ತೋರಿದ ಕಳಪೆ ಪ್ರದರ್ಶನದ ಬಗ್ಗೆ ಇದೀಗ ಇಂಗ್ಲೆಂಡ್​ ತಂಡದ ಮಾಜಿ ಬ್ಯಾಟರ್​ ಕೆವಿನ್​ ಪೀಟರ್ಸನ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಭೂಮಿ ಮನುಷ್ಯ ಜೀವನಕ್ಕೆ ಆಧಾರ: ಶ್ರೀಧರ್ ಭಟ್ ಅಭಿಪ್ರಾಯ ಹುಣ್ಣಿಮೆ ಆಚರಣೆ

ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಕೆವಿನ್​, “ಕೆ.ಎಲ್. ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳಿಸುತ್ತಿರುವುದು ಸರಿಯಲ್ಲ. ಈ ವಿಷಯದಲ್ಲಿ ಮ್ಯಾನೇಜ್​ಮೆಂಟ್​ ತನ್ನ ನಿರ್ಧಾರವನ್ನು ಬದಲಿಸಬೇಕು. ಎಡ-ಬಲ ಬ್ಯಾಟಿಂಗ್ ಸಂಯೋಜನೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ, ಮ್ಯಾನೇಜ್​ಮೆಂಟ್​ ಅಕ್ಷರ್ ಪಟೇಲ್ ಅವರನ್ನು ಮೊದಲ ಎರಡು ಪಂದ್ಯಗಳಿಗೆ 5ನೇ ಕ್ರಮಾಂಕದಲ್ಲಿ ಆಡಿಸಿತು ಮತ್ತು ರಾಹುಲ್​ರನ್ನು ಆರನೇ ಕ್ರಮಾಂಕದಲ್ಲಿ ಆಡಿಸಿತು” ಎಂದರು.

“ಮ್ಯಾನೇಜ್​ಮೆಂಟ್​ನ ಈ ನಿರ್ಧಾರ ಫಲಿಸಿತು. ಅಕ್ಷರ್ 52 ಮತ್ತು ಅಜೇಯ 41 ರನ್​ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ಆದಾಗ್ಯೂ, ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ತೀರ ಪರದಾಡಿದರು. ಮೂರು ಏಕದಿನ ಪಂದ್ಯಗಳ ಪೈಕಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್‌ಗಳನ್ನು ಮಾತ್ರ ಗಳಿಸಲು ಶಕ್ತರಾದರು. ಆದರೆ, ಮೂರನೇ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರಾಹುಲ್​ರನ್ನು 5ನೇ ಕ್ರಮಾಂಕದಲ್ಲಿ ಆಡಲು ಬಡ್ತಿ ನೀಡಿತು. 29 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ ರಾಹುಲ್​ ಕಮ್​ಬ್ಯಾಕ್​ ಮಾಡಿದರು” ಎಂದರು.

ಇದನ್ನೂ ನೋಡಿ: DK Suresh Press Meet | ಸಾಲದ ಹೊರೆಯನ್ನ ಜನರ ಮೇಲೆ ಹಾಕ್ತಿರೋದು ಕೇಂದ್ರ ಸರ್ಕಾರನೇ

“ನಾನು ಕೆ.ಎಲ್. ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ. ಕಾರಣ, ಅವರು ಕ್ರೀಸ್​ಗೆ ಬಂದ ತಕ್ಷಣ ಸೆಟಲ್​ ಆಗಲು ಸಮಯ ತೆಗೆದುಕೊಳ್ಳುತ್ತಾರೆ. ಏಕಾಏಕಿ ಬಾರಿಸಲು ಮುಂದಾಗುವುದಿಲ್ಲ. ಕೆಲವೇ ಓವರ್‌ಗಳು ಬಾಕಿ ಉಳಿದಿರುವಾಗ ಅಖಾಡಕ್ಕೆ ಬಂದು ಅಬ್ಬರದ ಬ್ಯಾಟಿಂಗ್ ಮಾಡುವ ಬ್ಯಾಟರ್​ ರಾಹುಲ್​ ಅಲ್ಲ. ಅವರಿಗೆ ಒಂದಷ್ಟು ಸಮಯದ ಅಗತ್ಯತೆ ಇದೆ. ಹೀಗಾಗಿ ಅವರಿಗೆ ಐದನೇ ಕ್ರಮಾಂಕ ಸೂಕ್ತ. ಮ್ಯಾನೇಜ್​ಮೆಂಟ್​ ಕೂಡ ಅವರನ್ನು ಐದನೇ ಸ್ಲಾಟ್​ನಲ್ಲಿ ಆಡಿಸುವುದೇ ಉತ್ತಮ” ಎಂದು ಹೇಳಿದರು,(ಏಜೆನ್ಸೀಸ್).

ಶೀಘ್ರವೇ ಆರ್​ಬಿಐನಿಂದ ಹೊಸ 50 ರೂ. ನೋಟು ರಿಲೀಸ್​! ಈ ನಿರ್ಧಾರದಿಂದ ಹಳೆಯ ನೋಟುಗಳ ಗತಿ ಏನು? ಇಲ್ಲಿದೆ ಉತ್ತರ | RBI

 

Share This Article

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…

ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional

devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…