ಥಗ್ ಲೈಫ್ ಚಿತ್ರದಲ್ಲಿ ಕಮಲ್​ ಹಾಸನ್​-ಅಭಿರಾಮಿ ಲಿಪ್​ಲಾಕ್​: ವಯಸ್ಸಿನ ಅಂತರದ ಬಗ್ಗೆ ಭಾರಿ ಟೀಕೆ! Kamal Hassan

Kamal Hassan

Kamal Hassan : ಸಕಲಕಲಾವಲ್ಲಭ ಎಂದೇ ಖ್ಯಾತಿ ಪಡೆದಿರುವ ಕಾಲಿವುಡ್‌ ಸ್ಟಾರ್ ಹೀರೋ ಕಮಲ್ ಹಾಸನ್ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಜುಗಲ್​ಬಂದಿಯಲ್ಲಿ ಮತ್ತೊಂದು ಚಿತ್ರ ತಯಾರಾಗಿದೆ. ಅದರ ಹೆಸರೇ ಥಗ್ ಲೈಫ್. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಜೊತೆಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರದಲ್ಲಿ ಸಿಂಬು, ತ್ರಿಷಾ ಕೃಷ್ಣನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಕಮಲ್ ಹಾಸನ್, ಆರ್. ಮಹೇಂದ್ರನ್, ಮಣಿರತ್ನಂ, ಶಿವ ಅಣ್ಣಾತಿ ಹಾಗೂ ಉದಯನಿಧಿ ಸ್ಟಾಲಿನ್ ನಿರ್ಮಿಸಿದ್ದಾರೆ. ಈ ಚಿತ್ರ ಜೂನ್ 5 ರಂದು ಬಿಡುಗಡೆಯಾಗಲಿದೆ.

ಥಗ್ ಲೈಫ್ ಸಿನಿಮಾದ ಟ್ರೇಲರ್‌ನಲ್ಲಿ 70 ವರ್ಷದ ಕಮಲ್ ಹಾಸನ್ ಮತ್ತು 40 ವರ್ಷದ ಅಭಿರಾಮಿ ನಡುವಿನ ಲಿಪ್‌ಲಾಕ್ ದೃಶ್ಯವಿದೆ. ಇಬ್ಬರ ನಡುವೆ 30 ವರ್ಷಗಳ ವಯಸ್ಸಿನ ಅಂತರವಿದೆ. ಹೀಗಾಗಿ ಕೆಲ ನೆಟ್ಟಿಗರು ಲಿಪ್​ಲಾಕ್​ ದೃಶ್ಯವನ್ನು ಟೀಕಿಸುತ್ತಿದ್ದಾರೆ.

ಅಲ್ಲದೆ, ಕಮಲ್ ಹಾಸನ್​ ಅವರು ದೃಶ್ಯವೊಂದರಲ್ಲಿ ತ್ರಿಷಾಗೆ ಹೇಳುವ ಸಂಭಾಷಣೆ ಕೂಡ ತುಂಬಾ ಬೋಲ್ಡ್ ಆಗಿದೆ. ಹೀಗಾಗಿ, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ವಯಸ್ಸಿನ ಅಂತರ ಹೆಚ್ಚಾಗಿದ್ದು, ಪ್ರಣಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಹೀಗಾಗಿಯೇ ಟ್ರೇಲರ್ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ.

ಇದನ್ನೂ ಓದಿ: ಈ ಅಕ್ಷರಗಳಿಂದ ಆರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರಂತೆ! Astrology

ಇನ್ನು ಕಮಲ್ ಅಭಿಮಾನಿಗಳು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಕೇವಲ ಚುಂಬನ ದೃಶ್ಯಗಳು ಮತ್ತು ಇಂಟಿಮೇಟ್​ ದೃಶ್ಯಗಳ ಮೇಲೆ ಕೇಂದ್ರೀಕರಿಸುವುದು ಸರಿಯಲ್ಲ ಎಂದಿದ್ದಾರೆ. ಇವೆಲ್ಲವೂ ಸಿನಿಮಾಗಳಲ್ಲಿ ಬಹಳ ಸಾಮಾನ್ಯ. ಅವುಗಳ ಮೇಲೆ ಕೇಂದ್ರೀಕರಿಸುವುದನ್ನು ಮೊದಲು ನಿಲ್ಲಿಸಿ ಎಂದಿದ್ದಾರೆ.

ಅಂದಹಾಗೆ, ಕೇರಳ ಮೂಲದ ಅಭಿರಾಮಿ, ಕನ್ನಡದಲ್ಲಿ ದರ್ಶನ್​ ನಟನೆಯ ಲಾಲಿ ಹಾಡು, ಶಿವರಾಜ್​ಕುಮಾರ್​ ಅಭಿನಯದ ಶ್ರೀರಾಮ್​, ಉಪೇಂದ್ರ ಅಭಿನಯದ ರಕ್ತ ಕಣ್ಣೀರು, ರವಿಚಂದ್ರನ್​ ನಟನೆಯ ದಶರಥ ಹಾಗೂ ಸುದೀಪ್​ ನಟನೆಯ ಕೋಟಿಗೊಬ್ಬ ಸಿನಿಮಾದಲ್ಲಿ ನಟಿಸಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸಿನಿಮಾಗಳಲ್ಲಿ ಬಿಜಿಯಾಗಿರುವಾಗಲೇ 2004 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿ 2013 ರಲ್ಲಿ ಮರಳಿದರು. ಸದ್ಯ ಪೋಷಕ ಪಾತ್ರಗಳಲ್ಲಿ ಅಭಿರಾಮಿ ಮಿಂಚುತ್ತಿದ್ದಾರೆ. ವಿಶ್ವರೂಪಂ ಮತ್ತು ವಿಶ್ವರೂಪಂ 2 ಚಿತ್ರಗಳ ತಮಿಳು ಆವೃತ್ತಿಯಲ್ಲಿ ನಾಯಕಿ ಪೂಜಾ ಕುಮಾರ್ ಅವರಿಗೆ ಡಬ್ಬಿಂಗ್ ಮಾಡಿದ್ದ ಅಭಿರಾಮಿಗೆ ಇದೀಗ ಕಮಲ್ ಎದುರು ನಟಿಸುವ ಅವಕಾಶ ಸಿಕ್ಕಿದೆ. (ಏಜೆನ್ಸೀಸ್​)

ಮದುವೆಯಾದ ಒಂದೇ ವಾರದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದ ಗಂಡ! ಕಾರಣ ಹೀಗಿದೆ…Husband Kills Wife

ವಿರಾಟ್​ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಆಗ್ರಹ! Virat Kohli

Share This Article

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…