ಮುಂಬೈ: ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹೋಗಿದೆ ಎಂಬ ಸುದ್ದಿಯಾದಾಗ, ಬಹುಶಃ ಎಲ್ಲರಿಗಿಂಥ ಹೆಚ್ಚು ಖುಷಿಪಟ್ಟವರು ನಟಿ ಕಾಜಲ್ ಅಗರ್ವಾಲ್ ಇರಬೇಕು.
ಇದನ್ನೂ ಓದಿ: ನಟನೆಗೆ ಗುಡ್ಬೈ ಹೇಳಿದರಂತೆ ಇಮ್ರಾನ್ ಖಾನ್ …
ಏಕೆಂದರೆ, ಈ ಚಿತ್ರದಲ್ಲಿ ಕಾಜಲ್, ಚಿರಂಜೀವಿಗೆ ನಾಯಕಿಯಾಗಿ ನಟಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ವಾಪಸ್ಸಾಗಬೇಕಿತ್ತು. ಅಷ್ಟರಲ್ಲಿ ಚಿರಂಜೀವಿಗೆ ಕರೊನಾ ಪಾಸಿಟಿವ್ ಎಂಬ ಸುದ್ದಿಯಾಗಿ, ಚಿತ್ರೀಕರಣ ಮುಂದಕ್ಕೆ ಹಾಕಲಾಯಿತು.
ಇದೀಗ ಚಿರಂಜೀವಿ ಅವರಿಗೆ ಕರೊನಾ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಡಿಸೆಂಬರ್ 5ರಂದು ಪ್ರಾರಂಭವಾಗಲಿದ್ದು, ಅದರಲ್ಲಿ ಭಾಗವಹಿಸುವುದಕ್ಕೆ ಕಾಜಲ್, ಹನಿಮೂನ್ ಮುಗಿಸಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಇತ್ತೀಚೆಗೆ ಹನಿಮೂನ್ ಮುಗಿಸಿ ಮುಂಬೈಗೆ ವಾಪಸ್ಸಾಗಿರುವ ಕಾಜಲ್ ಮತ್ತು ಗೌತಮ್ ಕಿಚ್ಲು, ತಮ್ಮ ಕುಟುಂಬದವರ ಜತೆಗೆ ಭಾಜ್ಧೂಜ್ ಎಂಬ ಹಬ್ಬವನ್ನೂ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಸಂಬಂಧಿಕರ ಮನೆಗೆ ಹೋಗಿ ದೀಪಾವಳಿಯ ಶುಭಾಶಯಗಳನ್ನು ಹೇಳಿ ಬಂದಿದ್ದಾರೆ.
ಇದನ್ನೂ ಓದಿ: ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ
ಹಬ್ಬದ ಮೂಡ್ನಲ್ಲಿರುವ ಕಾಜಲ್, ಸದ್ಯದಲ್ಲೇ ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಆರತಕ್ಷತೆ ಸಮಾರಂಭವನ್ನು ಇಟ್ಟುಕೊಂಡಿದ್ದು, ಅದನ್ನು ಮುಗಿಸಿ, ‘ಆಚಾರ್ಯ’ ಚಿತ್ರದ ಚಿತ್ರೀಕರಣದಲ್ಲಿ ಕಾಜಲ್ ಭಾಗವಹಿಸಲಿದ್ದಾರೆ.