ಹೈದರಾಬಾದ್: ಯಾವಾಗ ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ತೆಲುಗಿಗೆ ರೀಮೇಕ್ ಆಗುತ್ತದೆ ಮತ್ತು ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಯಿತೋ, ಆಗಿನಿಂದ ಪೃಥ್ವಿರಾಜ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವವಾಯಿತು.
ಇದನ್ನೂ ಓದಿ: ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ
ಮೊದಲಿಗೆ ಪೃಥ್ವಿರಾಜ್ ಮಾಡಿದ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಾರೆ ಎಂಬ ವಿಷಯ ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರಾಣಾ ಆಗಲೀ ಈ ಚಿತ್ರದ ಬಗ್ಗೆ ಯಾವ ಮಾತನ್ನೂ ಆಡಲಿಲ್ಲ. ನಂತರ ರಾಣಾ ಬದಲು ಕನ್ನಡಿಗ ಸುದೀಪ್ ಅವರ ಹೆಸರು ಕೇಳಿಬಂತು. ಸುದೀಪ್ ಈಗಾಗಲೇ ಒಂದಿಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿರುವುದರಿಂದ, ಅವರು ಪಾತ್ರ ಮಾಡಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ, ಈ ಚಿತ್ರದಲ್ಲಿ ಸುದೀಪ್ ನಟಿಸುವುದಿಲ್ಲ ಎಂಬ ವಿಷಯ ಕಳೆದ ವಾರವಷ್ಟೇ ಕೇಳಿ ಬಂತು. ಚಿತ್ರದ ಸ್ಕ್ರಿಪ್ಟ್ನಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದ್ದು, ಪೃಥ್ವಿರಾಜ್ ಮಾಡಿದ ಪಾತ್ರವೇ ಇರುವುದಿಲ್ಲ, ಅದರ ಬದಲು ಒಂದು ಪಕ್ಕಾ ನೆಗೆಟಿವ್ ಪಾತ್ರವನ್ನು ಈ ಚಿತ್ರಕ್ಕಾಗಿ ಸೃಷ್ಟಿಸಲಾಗುತ್ತಿದೆ ಎಂದು ಸುದ್ದಿಯಾಯಿತು.
ಇದೀಗ ನೋಡಿದರೆ, ಪೃಥ್ವಿರಾಜ್ ಮಾಡಿದ ಪಾತ್ರವನ್ನು ಗೋಪಿಚಂದ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆ ಪಾತ್ರಕ್ಕೆ ಇರಬೇಕಾದ ಪಿಸಿಕ್ ಗೋಪಿಚಂದ್ಗೆ ಇದ್ದು, ಅವರು ಈ ಚಿತ್ರದಲ್ಲಿ ನಟಿಸಿದರೆ ಚೆನ್ನ ಎಂಬ ಅಭಿಪ್ರಾಯ ಚಿತ್ರತಂಡಕ್ಕಿದೆ.
ಇದನ್ನೂ ಓದಿ: ಹಾದಿ ಸುಗಮವಾಗಿರಲಿಲ್ಲ – ತಾಪ್ಸಿ ಹೇಳಿದ ಹೋರಾಟದ ಕಥೆ
ಅದೇ ಕಾರಣಕ್ಕೆ, ಈಗಾಗಲೇ ಗೋಪಿಚಂದ್ಗೆ ಆಫರ್ ನೀಡಲಾಗಿದೆಯಂತೆ. ಆದರೆ, ಸದ್ಯ ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವ ಗೋಪಿಚಂದ್, ಕೆಲವು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರಂತೆ. ಗೋಪಿಚಂದ್ ಎಸ್ ಎನ್ನುತ್ತಾರಾ ಅಥವಾ ನೋ ಎನ್ನುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.