ಹೈದರಾಬಾದ್: ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಬಿರುಸು ಪಡೆದುಕೊಂಡಿದೆ. ಟಾಲಿವುಡ್ ಸ್ಟಾರ್ ನಟರು ಬೆಳ್ಳಂಬೆಳಗ್ಗೆಯೇ ಮತಗಟ್ಟೆಗೆ ಆಗಮಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಯುವಜನರಿಗೆ ತಪ್ಪದೇ ಮತದಾನ ಮಾಡವಂತೆ ಕರೆ ನೀಡಿದ್ದಾರೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಏಕಾಂಗಿಯಾಗಿ ಬಂದು ಮತದಾನ ಮಾಡಿದರೆ, ಜೂ. ಎನ್ಟಿಆರ್ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಮೆಗಾಸ್ಟಾರ್ ಚಿರಂಜೀವಿ ಸಹ ತಮ್ಮ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು. ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಹಕ್ಕು ಚಲಾಯಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೆಲವು ವಾರಗಳ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಇಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಅಲ್ಲು ಅರ್ಜುನ್ ಅವರು ಜುಬಿಲಿ ಹಿಲ್ಸ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಈ ವೇಳೆ ಅಭಿಮಾನಿಗಳ ಮನವಿ ಮೇರೆಗೆ ಸೆಲ್ಫಿಗೆ ಪೋಸ್ ಸಹ ನೀಡಿದರು. ಮತ ಚಲಾಯಿಸಿದ ಫೋಟವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ದಯವಿಟ್ಟು ಮತದಾನ ಮಾಡಿ ನಿಮ್ಮ ನಿಮ್ಮ ಜವಬ್ದಾರಿ ಮೆರೆಯುವಂತೆ ಕೇಳಿಕೊಂಡಿದ್ದಾರೆ.
ನೀವು ವೋಟ್ ಮಾಡಲ್ವಾ?
ತಮ್ಮ ಕುಟುಂಬ ಸಮೇತ ಜುಬಿಲಿ ಹಿಲ್ಸ್ ಮತಗಟ್ಟೆಯಲ್ಲಿ ವೋಟ್ ಮಾಡಲು ಬಂದಿದ್ದ ಜೂ. ಎನ್ಟಿಆರ್ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದು, ಎಲ್ಲರ ಗಮನ ಸೆಳೆಯಿತು. ಕ್ಯೂನಲ್ಲಿ ನಿಂತಿರುವ ಸಮಯದಲ್ಲಿ ಮಾಧ್ಯಮ ಮತ್ತು ಯೂಟ್ಯೂಬ್ ಮಂದಿ ಎನ್ಟಿಆರ್ ಫೋಟೋ ಮತ್ತು ವಿಡಿಯೋಗಾಗಿ ಮುಗಿಬಿದ್ದರು. ಈ ವೇಳೆ ಅವರನ್ನು ನೋಡಿ ನೀವು ವೋಟ್ ಮಾಡುವುದಿಲ್ಲವೇ? ಇಲ್ಲಿಯೇ ಇರುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ವ್ಯಕ್ತಿಯೊಬ್ಬರು ಉತ್ತರ ನೀಡಿ, ನೀವು ವೋಟ್ ಮಾಡಿದ ಬಳಿಕ ನಾವು ಮಾಡುತ್ತೇವೆ ಎಂದರು.
ಚಿರಂಜೀವಿ, ಜೂ. ಎನ್ಟಿಆರ್, ರಾಣಾ ದಗ್ಗುಬಾಟಿ, ವೆಂಕಟೇಶ್ ದಗ್ಗುಬಾಟಿ ಸೇರಿದಂತೆ ಸ್ಟಾರ್ ನಟರುಗಳು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಶೂಟಿಂಗ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿದ್ದ ರಾಮ್ ಚರಣ್, ನಿನ್ನೆಯೇ ಹೈದರಾಬಾದ್ಗೆ ಆಗಮಿಸಿ ಇಂದು ತಮ್ಮ ಹಕ್ಕನ್ನು ಚಲಾಯಿಸಿ, ಇತರರಿಗೆ ಮಾದರಿಯಾಗಿದ್ದಾರೆ. (ಏಜೆನ್ಸೀಸ್)
ಐಪಿಎಲ್ ಹರಾಜು ನೋಂದಣಿಗೆ ಇಂದು ಕೊನೇ ದಿನ: ಈ ಸ್ಟಾರ್ ಆಟಗಾರರ ಮೇಲಿದೆ ಎಲ್ಲರ ಕಣ್ಣು!
‘ಮಾನವ ಶ್ರಮದ ಜಯಭೇರಿ’: ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಿದ ರೀತಿಗೆ ಹಾಡಿಹೊಗಳಿದ ವಿದೇಶಿ ಮಾಧ್ಯಮಗಳು
ಬಾ ಎಂದು ಕರೆದೆ ಆದ್ರೆ ಅವಳು… ಬಿಗ್ಬಾಸ್ ಮನೆಯಲ್ಲಿ ಮದುವೆ ರಹಸ್ಯ ಬಿಚ್ಚಿಟ್ಟ ವರ್ತೂರ್ ಸಂತೋಷ್!