ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಜಸ್​ಪ್ರೀತ್​ ಬುಮ್ರಾ ಉಪನಾಯಕ?

blank

ನವದೆಹಲಿ: ಸಿಡ್ನಿ ಟೆಸ್ಟ್​ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿರುವ ವೇಗಿ ಜಸ್​ಪ್ರೀತ್​ ಬುಮ್ರಾ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಕ್ರಿಕೆಟ್​ ಸರಣಿಯ ಹೆಚ್ಚಿನ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಸಂಪೂರ್ಣ ಫಿಟ್​ ಆಗುವುದಕ್ಕಾಗಿ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಇದಲ್ಲದೆ ಚಾಂಪಿಯನ್ಸ್​ ಟ್ರೋಫಿಗೆ ಅವರು ಭಾರತ ತಂಡದ ಉಪನಾಯಕರಾಗಿ ನೇಮಕವಾಗುವ ನಿರೀಕ್ಷೆಯೂ ಇದೆ.

ಬಿಜಿಟಿ ಸರಣಿಯಲ್ಲಿ 150ಕ್ಕೂ ಅಧಿಕ ಓವರ್​ ಬೌಲಿಂಗ್​ ಮಾಡಿದ್ದ ಬುಮ್ರಾ 32 ವಿಕೆಟ್​ ಕಬಳಿಸಿದ್ದರು. ಬೆನ್ನುನೋವಿನಿಂದಾಗಿ ಸರಣಿಯ ಕೊನೇ ಇನಿಂಗ್ಸ್​ನಲ್ಲಿ ಅವರು ಬೌಲಿಂಗ್​ ಮಾಡಿರಲಿಲ್ಲ. ಹೀಗಾಗಿ ಅವರ ಕಾರ್ಯದೊತ್ತಡ ತಗ್ಗಿಸಲು ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆ ಇಲ್ಲ. ಇದು ವಿಶ್ವಕಪ್​ ವರ್ಷ ಅಲ್ಲದ ಕಾರಣ ಬುಮ್ರಾ ಟಿ20 ಸರಣಿಯಲ್ಲಿ ಆಡುವುದಿಲ್ಲ. ಆದರೆ ಚಾಂಪಿಯನ್ಸ್​ ಟ್ರೋಫಿಗೆ ಪೂರ್ವಸಿದ್ಧತೆಯಾಗಿ ಏಕದಿನ ಸರಣಿಯಲ್ಲಿ ಒಂದೆರಡು ಪಂದ್ಯ ಆಡಬಹುದು. ಸರಣಿಯ ಕೊನೇ ಪಂದ್ಯ ಫೆ.12ರಂದು ಅಹಮದಾಬಾದ್​ನಲ್ಲಿ ನಡೆಯಲಿದ್ದು, ಇದು ಬುಮ್ರಾರ ತವರು ನೆಲ ಆಗಿರುವುದರಿಂದ ಅಲ್ಲಿ ಆಡಿಸಬಹುದು ಎನ್ನಲಾಗಿದೆ.

ಬುಮ್ರಾ ಗಾಯದ ಗಂಭೀರತೆ ಅಸ್ಪಷ್ಟ
ಬುಮ್ರಾರ ಬೆನ್ನುನೋವಿನ ಗಂಭೀರತೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅವರ ಬೆನ್ನು ಸೆಳೆತ ಗ್ರೇಡ್​-1 ಗಾಯವಾಗಿದ್ದರೆ, ಕನಿಷ್ಠ 2ರಿಂದ 3 ವಾರಗಳ ಪುನಶ್ಚೇತನ ಬೇಕಾಗುತ್ತದೆ. ಗ್ರೇಡ್​-2 ಇಂಜುರಿ ಆಗಿದ್ದರೆ 6 ವಾರಗಳು ಬೇಕಾಗುತ್ತದೆ. ಗ್ರೇಡ್​-3 ಆಗಿದ್ದರೆ ಗಂಭೀರವೆನಿಸಲಿದ್ದು, 3 ವಾರಗಳ ವಿಶ್ರಾಂತಿ ಮತ್ತು ಪುನಶ್ಚೇತನ ಅಗತ್ಯವಾಗಿರುತ್ತದೆ.

ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್​ ಬೇಸರ; ಕ್ರಿಕೆಟ್​ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…

TAGGED:
Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…