ಸಿಡ್ನಿ: ತನ್ನದೇ ಹೆಸರು ಹೊಂದಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತ್ಯದಲ್ಲಿ ಟ್ರೋಫಿ ವಿತರಣೆಯ ವೇಳೆ ಆತಿಥೇಯ ಆಸ್ಟ್ರೆಲಿಯಾ ತನ್ನನ್ನು ವೇದಿಕೆಗೆ ಕರೆಯದ ಬಗ್ಗೆ ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ವೀಕ್ಷಕ ವಿವರಣೆಕಾರರಾಗಿ ಮೈದಾನದಲ್ಲೇ ಹಾಜರಿದ್ದರೂ ತನ್ನನ್ನು ಕಡೆಗಣಿಸಿದ ಬಗ್ಗೆ ಅವರು ಅಸಮಾಧಾನ ತೋಡಿಕೊಂಡಿದ್ದಾರೆ. “ಪ್ರಶಸ್ತಿ ವಿತರಣೆಯ ವೇಳೆ ಹಾಜರಿರಲು ನಾನು ಖುಷಿಪಡುತ್ತಿದ್ದೆ. ಯಾಕೆಂದರೆ ಅದು ಬಾರ್ಡರ್&ಗಾವಸ್ಕರ್ ಟ್ರೋಫಿ. ಭಾರತ-ಆಸೀಸ್ ನಡುವಿನ ಸರಣಿ. ಆಸೀಸ್ ಸರಣಿ ಗೆದ್ದಿದ್ದರೂ, ಟ್ರೋಫಿ ವಿತರಿಸಲು ನನಗೆ ಸಂಕೋಚ ಇರಲಿಲ್ಲ. ಅವರು ಉತ್ತಮ ಕ್ರಿಕೆಟ್ ಆಡಿ ಗೆದ್ದರು. ನಾನೋರ್ವ ಭಾರತೀಯನಾಗಿರುವ ಕಾರಣಕ್ಕಾಗಿ ಕಡೆಗಣಿಸಬಾರದಿತ್ತು. ಗೆಳೆಯ ಅಲನ್ ಬಾರ್ಡರ್ ಜತೆಗೂಡಿ ಟ್ರೋಫಿ ವಿತರಿಸಲು ಖುಷಿಪಡುತ್ತಿದ್ದೆ’ ಎಂದು ಗಾವಸ್ಕರ್ ಹೇಳಿದ್ದಾರೆ.
ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ “ಕ್ರಿಕೆಟ್ ಆಸ್ಟ್ರೆಲಿಯಾ’ (ಸಿಎ), ಭಾರತ ತಂಡ ಗೆದ್ದಿದ್ದರೆ ಮಾತ್ರ ಟ್ರೋಫಿ ವಿತರಣೆಗೆ ಗಾವಸ್ಕರ್ರನ್ನು ಕರೆಯುವ ಯೋಜನೆ ನಮ್ಮದಾಗಿತ್ತು ಎಂದು ಸ್ಪಷ್ಟಪಡಿಸಿದೆ.
ಸಿಡ್ನಿ ಟೆಸ್ಟ್ ಮೊದಲ ದಿನದಂತ್ಯಕ್ಕೆ ಬುಮ್ರಾ-ಕಾನ್ಸ್ಟಾಸ್ ಜಟಾಪಟಿ, ಒಗ್ಗಟ್ಟಾದ ಭಾರತ!