ಆನೇಕಲ್: ಸುತ್ತಮುತ್ತ ಇದ್ದವರನ್ನೊಮ್ಮೆ ಬೆಚ್ಚಿಬೀಳಿಸುವಂಥ ಭೀಕರ ಅಪಘಾತವೊಂದು ನಡೆದಿದೆ. ಈ ಅಪಘಾತದ ವಿಡಿಯೋ ಕೂಡ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಅಪಘಾತದ ದೃಶ್ಯ ಎಂಥವರೂ ಒಮ್ಮೆ ಹುಬ್ಬೇರಿಸುವಂತಿದೆ.
ಹೊಸೂರಿನ ಬೆಂಗಳೂರು ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೊಸೂರು ಕಡೆಗೆ ಅತಿವೇಗದಲ್ಲಿ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ್ದು, ನಂತರ ಡಿವೈಡರ್ ಮೇಲೆಯೇ ಕೆಲವು ದೂರ ಸಾಗಿದೆ.
ಇದನ್ನೂ ಓದಿ: ಲಂಚ ಪಡೆದು ಬಂಧನಕ್ಕೆ ಹೆದರಿ ನಾಲ್ಕನೇ ಮಹಡಿಯಿಂದ ಹಾರಿದ ಅಧಿಕಾರಿ; ಪ್ರಾಣವೇ ಹೋಯ್ತು
ಈ ಟಿಪ್ಪರ್ ಕಾರು ಹಾಗೂ ದ್ವಿಚಕ್ರ ವಾಹನ ಸವಾರರಿಗೂ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಅಪಘಾತದಲ್ಲಿ ಟಿಪ್ಪರ್ ಚಾಲಕನ ಕಾಲು ಮುರಿತಕ್ಕೆ ಒಳಗಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕ್ರೇನ್ ಮೂಲಕ ಟಿಪ್ಪರ್ ತೆರವುಗೊಳಿಸಲಾಗಿದೆ.
ಪ್ಯಾನ್-ಆಧಾರ್ ಲಿಂಕ್, ಮಾ. 31 ಕಡೇ ದಿನ: ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?