More

    ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್.ಪಿ. ಹಿಂದುಜಾ ನಿಧನ

    ನವದೆಹಲಿ: ಹಿಂದೂಜಾ ಸಮೂಹ ಸಂಸ್ಥೆಗಳ ಚೇರ್ಮನ್​ ಶ್ರೀಚಂದ್​ ಪರ್ಮಾನಂದ ಹಿಂದುಜಾ(87) ಲಂಡನ್​ನಲ್ಲಿ ವಿಧಿವಶರಾಗಿದ್ದಾರೆ.

    ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

    ಭಾರತೀಯ ಮೂಲದ ಬ್ರಿಟನ್​ ಪ್ರಜೆಯಾಗಿದ್ದ ಎಸ್​ಪಿ ಹಿಂದುಜಾ ಅವರ ನಿಧನವನ್ನು ಸಹೋದರರು ಹಾಗೂ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿವೆ.

    ಸಂಕೇಶ್ವರರ ಸಂತಾಪ

    ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್.ಪಿ. ಹಿಂದುಜಾ ನಿಧನ

    ವಿಆರ್‌ಎಲ್‌ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಅವರ ಪುತ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ ಅವರು ಎಸ್.ಪಿ. ಹಿಂದುಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿಂದುಜಾ ಪರಿವಾರದ ಕಂಪನಿಗಳು ಮತ್ತು ಉದ್ಯೋಗಿಗಳು ಶೋಕ ವ್ಯಕ್ತಪಡಿಸಿದ್ದು, ಅಧ್ಯಕ್ಷರಾಗಿದ್ದ ಎಸ್.ಪಿ. ಹಿಂದುಜಾ ನಿಧನವು ಸಂಸ್ಥೆಗೆ ದೊಡ್ಡ ನಷ್ಟವಾಗಿದೆ. ಅವರ ಮಾರ್ಗದರ್ಶನದಲ್ಲಿ ಕಂಪನಿ ಹೆಚ್ಚು ಪ್ರವರ್ಧಮಾನಕ್ಕೆ ಬಂತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts