ಭವಿಷ್ಯದಲ್ಲಿ ಈತ ನಾಯಕನಾದರೂ ಅಚ್ಚರಿಪಡಬೇಕಾಗಿಲ್ಲ; Team India ಆಟಗಾರನ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Team India

ಮುಂಬೈ: ಈಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್​​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ (Team India) ತನ್ನ ಕಳಪೆ ಪ್ರದರ್ಶನದಿಂದಾಗಿ ಸೋಲುಂಡಿದ್ದು, ಕ್ರೀಡಾಭಿಮಾನಿಗಳು ಟೀಮ್​ ಇಂಡಿಯಾ ಪ್ರದರ್ಶನಕ್ಕೆ ಕಿಡಿಕಾರುತ್ತಿದ್ದಾರೆ. ಇತ್ತ ಸರಣಿ ಸೋಲಿಗೆ ಸಂಬಂಧಿಸಿದಂತೆ ಬಿಸಿಸಿಐ ಗೌತಮ್​ ಗಂಭೀರ್​ ಹಾಗೂ ನಾಯಕ ರೋಹಿತ್ ಶರ್ಮರ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಲು ನಿರ್ಧಿರಿಸಿದ್ದು, ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

blank

ಇನ್ನೂ ರೋಹಿತ್ ನಾಯಕತ್ವದ ವಿಚಾರವಾಗಿ ಹಲವರು ಅಪಸ್ವರ ತೆಗೆದಿದ್ದು, ಹೊಸ ನಾಯಕತ್ವಕ್ಕೆ ಬೇಡಿಕೆಯನ್ನು ಇರಿಸಿದ್ದಾರೆ. ಗೌತಮ್​ ಗಂಭೀರ್ ಜೊತೆಗೆ ಹಿಟ್​ಮ್ಯಾನ್​ರ ಬದಲಾವಣೆಗೆ ಕೂಗು ಕೇಳಿ ಬರುತ್ತಿದ್ದು, ಮಾಜಿ ಕ್ರಿಕೆಟಿಗರು ಹೊಸ ನಾಯಕನ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದ್ದಾರೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್ ಕೂಡ ಮಾತನಾಡಿದ್ದು, ನಾಯಕತ್ವ ಬದಲಾವಣೆ ಕೂಗಿಗೆ ಧ್ವನಿಗೂಡಿಸಿದ್ದಾರೆ. Bumrah Gavaskar

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುನಿಲ್​ ಗವಾಸ್ಕರ್, ನಾನು ನೋಡಿದಂರೆ ಬುಮ್ರಾ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಒತ್ತಡವನ್ನು ನಿಭಾಯಿಸಿ ಇತರೆ ಆಟಗಾರರು ತಮ್ಮ ಉತ್ತಮ ನಿರ್ವಹಣೆ ನೀಡುವಂತೆಯೂ ಪ್ರೇರೇಪಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಬುಮ್ರಾ ತಂಡದ ಅಗ್ರಮಾನ್ಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ತಂಡದ ಸಹ ಬೌಲರ್‌ಗಳಿಗೂ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಭವಿಷ್ಯದಲ್ಲಿ ಅವರು ಟೀಮ್​ ಇಂಡಿಯಾ (Team India)  ನಾಯಕರಾದರೆ ಅಚ್ಚರಿಪಡಬೇಕಾಗಿಲ್ಲ ಎಂದು ಸುನಿಲ್​ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

blank

ಬಾರ್ಡರ್​-ಗವಾಸ್ಕರ್​​ ಟ್ರೋಫಿ ಸರಣಿ ವಿಚಾರಕ್ಕೆ ಬರುವುದಾದರೆ ಜಸ್ಪ್ರೀತ್ ಬುಮ್ರಾ 32 ವಿಕೆಟ್​ಗಳನ್ನು ಪಡೆಯುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಸರಣಿಯ ಮೊದಲ ಪಂದ್ಯದಲ್ಲಿ ತಂಡವನ್ನು (Team India) ಮುನ್ನಡೆಸಿದ ಬುಮ್ರಾ 295 ರನ್​ಗಳ ಭರ್ಜರಿ ಜಯಕ್ಕೆ ಕಾರಣರಾಗಿದ್ದರು. ಇದಾದ ಬಳಿಕ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಭಾರತ ತಂಡ 10 ವರ್ಷಗಳ ಬಳಿಕ ಆಸ್ಟ್ರೇಲಿಯಾದ ನೆಲದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು.

Salary Hike ಮಾಡಲ್ಲವೆಂದ ಮಾಲೀಕನ ವಿರುದ್ಧ ಸೇಡು ತೀರಿಸಿಕೊಂಡ ಉದ್ಯೋಗಿ; ಕದ್ದ ಹಣ, ವಸ್ತುಗಳ ಮೌಲ್ಯ ಎಷ್ಟು ಗೊತ್ತಾ?

ರಾಜಕೀಯ ಕಾರಣಗಳಿಂದ ಮೇಕೆದಾಟುವಿಗೆ ಅನುಮತಿ ವಿಳಂಬ: DCM DK Shivakumar

Share This Article

Health Tips | ತುಪ್ಪ & ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದು ವಿಷಕಾರಿಯೇ?; ಇಲ್ಲಿದೆ ಹೆಲ್ತಿ ಮಾಹಿತಿ

ತುಪ್ಪ ಮತ್ತು ಜೇನುತುಪ್ಪ ಎರಡೂ ವ್ಯಕ್ತಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದದಲ್ಲಿ ಇವೆರಡನ್ನೂ ಬಹಳ ಮುಖ್ಯವೆಂದು…

ತೂಕ ಇಳಿಸಲು ಫ್ರೂಟ್ಸ್​​ ಅಥವಾ ಜ್ಯೂಸ್​​​​ ಯಾವುದು ಉತ್ತಮ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಬೇಸಿಗೆಕಾಲ ಮಾತ್ರವಲ್ಲ ಬಹಳಷ್ಟು ಜನರು ಆರೋಗ್ಯದ ದೃಷ್ಟಿಯಿಂದ ಫ್ರೂಟ್​ ಜ್ಯೂಸ್​​​ ಅನ್ನು ಕುಡಿಯುತ್ತಾರೆ. ಹಣ್ಣುಗಳ ರಸ…

ಚಳಿಗಾಲದಲ್ಲಿ ಈ ಜ್ಯೂಸ್ ಕುಡಿದರೆ ಸಾಕು….ಸರ್ವ ರೋಗಕ್ಕೂ ಮದ್ದು spinach juice

spinach juice: ಚಳಿಗಾಲದಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ.  ಚಳಿಗಾಲದಲ್ಲಿ ಒಂದು ಜ್ಯೂಸ್ ಸೇವಿಸುವುದರಿಂದ ಹಲವಾರು…