More

    ತನ್ನ ಮುಖದ ಮೇಲಿದ್ದ ಮಣ್ಣು ಬಿಟ್ಟು ನನ್ನ ಮುಖದ ಮೇಲಿದ್ದ ಮಣ್ಣು ಒರೆಸಿದ್ದ ಪುಣ್ಯಾತ್ಮ ಪುನೀತ್: ನಟಿ ಹರ್ಷಿಕಾ ಪೂಣಚ್ಚ

    ಬೆಂಗಳೂರು: ನಟ ಪುನೀತ್ ರಾಜಕುಮಾರ್​ ಸಾವು ಬಹುತೇಕ ಎಲ್ಲ ವಯೋಮಾನದವರ ಕಣ್ಣಲ್ಲಿ ನೀರು ತರಿಸಿದೆ. ಅಪ್ಪು ಸಾವು ತುಂಬಾ ಮೋಸ ಮತ್ತು ದುರಂತ ಎಂದವರೇ ಹೆಚ್ಚು. ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋಗಿ ವಾರಗಳೇ ಕಳೆದರೂ ಅವರ ನೆನಪುಗಳು ಮಾತ್ರ ನಮ್ಮನ್ನು ಬಿಟ್ಟು ಹೋಗ್ತಿಲ್ಲ. ಮರೆಯಲಾಗದ ನೋವು ಎನ್ನುತ್ತ ಅಭಿಮಾನಿಗಳು, ನಟ-ನಟಿಯರು ಅಪ್ಪು ತಮ್ಮ ಜೊತೆಗಿದ್ದ ಕ್ಷಣಗಳನ್ನು ಮೆಲುಕು ಹಾಕುತ್ತ ಭಾವುಕರಾಗುತ್ತಿದ್ದಾರೆ. ತಮಗಾದ ಅನುಭವದ ಗುಣಗಾನ ಮಾಡುತ್ತಲೇ ಇದ್ದಾರೆ. ಇದೀಗ, ಅಪ್ಪು ಜತೆ ‘ಜಾಕಿ’ ಸಿನಿಮಾದಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ ಕೂಡಾ ಗಳಗಳನೆ ಅತ್ತಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಅಪ್ಪು ಅವರ ನಿಧನದ ದಿನದಿಂದ ಇಲ್ಲಿಯವರೆಗೆ ನಟಿ ಹರ್ಷಿಕಾ ಅವರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಬಂದು ಅಪ್ಪು ಅವರನ್ನು ನೆನದು, ಪುನೀತ್ ಜೊತೆ ಕಳೆದ ಸಮಯವನ್ನು ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ‘ಜಾಕಿ’ ಸಿನಿಮಾದಲ್ಲಿ ಅಪ್ಪು ಜತೆ ನಟಿಸಿದಾಗ, ಅವರ ಕಾಳಜಿ ಬಗ್ಗೆ ತನಗಾದ ಅನುಭವ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

    ‘ಅಪ್ಪು ಸರ್.. ಅವರ ಜೊತೆ ಕೆಲಸ ಮಾಡುವ ಕಲಾವಿದರನ್ನು ಬಹಳಷ್ಟು ಕಾಳಜಿಯಿಂದ ನೋಡ್ತಿದ್ರು. ಜಾಕಿ ಸಿನಿಮಾದ ಶೂಟಿಂಗ್ ವೇಳೆ ನನ್ನನ್ನು ಮತ್ತು ಅಪ್ಪು ಸರ್ ಅವರನ್ನು ಒಂದು ಗುಂಡಿಗೆ ತಳ್ಳಿ, ನಮ್ಮ ಮೇಲೆ ಮಣ್ಣು ಹಾಕುವ ದೃಶ್ಯವಿತ್ತು. ಕೆಲವು ಸೆಕೆಂಡ್​ಗಳ ಕಾಲ ನಾನು ಮತ್ತು ಅಪ್ಪು ಅವರು ಮಣ್ಣಿನ ಒಳಗೆ ಇರಬೇಕಿತ್ತು. ನಂತರ ನಮ್ಮನ್ನು ಆಚೆ ತೆಗೆದರು. ನಾವು ಆಚೆ ಬಂದಾಗ, ಅಪ್ಪು ಸರ್ ಮುಖ ಹಾಗೂ ಮೈ ಮೇಲೆ ಬರೀ ಮಣ್ಣು ಇತ್ತು. ಆದರೆ, ತನ್ನ ಮುಖದ ಮೇಲಿದ್ದ ಮಣ್ಣು ಬಿಟ್ಟು ನನ್ನ ಮುಖದ ಮೇಲಿದ್ದ ಮಣ್ಣು ಒರೆಸಿದ್ದ ಪುಣ್ಯಾತ್ಮ ಪುನೀತ್. ಜೊತೆಗೆ, ನೀರು ಕುಡಿಸಿ, ಹರ್ಷಿಕಾ ನಿನಗೆ ಹೇಗಿದೆ, ಉಸಿರಾಡು ಎಂದು ಮಾತನಾಡಿಸಿದ್ದರು’ ಎನ್ನುತ್ತ ಹರ್ಷಿಕಾ ಭಾವುಕರಾಗಿದ್ದಾರೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ‘ಹೀಗೆ ದೇವರಂತೆ ಭೂಲೋಕದಲ್ಲಿದ್ದ ನಮ್ಮ ‘ಅಪ್ಪು’ ದೇವರನ್ನು ತನ್ನೆಡೆಗೆ ಸೆಳೆದ ಆ ದೇವರದೆಷ್ಟು ಕ್ರೂರಿ?’. ಇನ್ನೊಮ್ಮೆ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಾನು ಬಿಸಿಲಲ್ಲಿ ಕೂತಿದ್ದಾಗ, ನನಗೆ ಅಪ್ಪು ಸರ್ ಅವರ ಕಾರಲ್ಲಿ ಕುಳಿತುಕೋ ಎಂದಿದ್ದರು. ಅಲ್ಲದೇ ನನ್ನ ತಾಯಿಯನ್ನು ಅವರು ತುಂಬಾ ಚೆನ್ನಾಗಿ ಮಾತಾಡಿಸುತ್ತಿದ್ದರು ಎಂದು ಹರ್ಷಿಕಾ ಇದೇ ವಿಡಿಯೋದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಪ್ಪು ಸರ್ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಹೋದಾಗ ಅವರ ಕಾಲು ಮುಟ್ಟಿ ನಮಸ್ಕರಿಸಿದರೂ ಅವರು ಉಸಿರು ನಿಲ್ಲಿಸಿದ್ದರು ಎಂಬುವುದನ್ನು ಆ ಕ್ಷಣದಲ್ಲಿ ನಂಬಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಹರ್ಷಿಕಾ ಭಾವುಕರಾಗಿ ಅಪ್ಪು ಬಗ್ಗೆ ಮಾತಾಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದು, ಅಪ್ಪು ಅಭಿಮಾನಿಗಳ ದುಃಖವನ್ನು ದುಪ್ಪಟ್ಟು ಮಾಡುತ್ತಿದೆ. ತನಗಾಗುವ ನೋವು ಮರೆತು ಮತ್ತೊಬ್ಬರಿಗೆ ನಗು ಮುಖ ತೋರಿಸುತ್ತಿದ್ದ ನಮ್ಮ ನೆಚ್ಚಿನ ಪುನೀತ್​​​ಗೆ ಎಷ್ಟು ನಮಿಸಿದರೂ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

    ಹಂಸಲೇಖಗೆ ಅನಾರೋಗ್ಯ: ಸ್ವಲ್ಪ ಕಾಲಾವಕಾಶ ಕೊಡಿ ಎಂದು ವಕೀಲರ ಕೋರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts