ಹಂಸಲೇಖಗೆ ಅನಾರೋಗ್ಯ: ಸ್ವಲ್ಪ ಕಾಲಾವಕಾಶ ಕೊಡಿ ಎಂದು ವಕೀಲರ ಕೋರಿಕೆ

ಬೆಂಗಳೂರು: ಪೇಜಾವರ ಶ್ರೀವಿಶ್ವೇಶತೀರ್ಥರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಚಿತ್ರಸಾಹಿತಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಒಂದು ವರ್ಗದ ಜನರಿಂದ ತೀವ್ರ ವಿರೋಧವನ್ನು ಎದುರಿಸುವಂತಾಗಿದೆ. ಮಾತ್ರವಲ್ಲ ಅವರ ವಿರುದ್ಧ ದೂರುಗಳೂ ದಾಖಲಾಗಿವೆ. ಅಂಥದ್ದೇ ಒಂದು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹಂಸಲೇಖಗೆ ನೋಟಿಸ್ ಕಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ಎರಡೆರಡು ಬಾರಿ ಹಂಸಲೇಖ ಅವರಿಗೆ ನೋಟಿಸ್ ಕಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಿಂದ ಹಂಸಲೇಖ ಅವರಿಗೆ ಎರಡು ದಿನಗಳ … Continue reading ಹಂಸಲೇಖಗೆ ಅನಾರೋಗ್ಯ: ಸ್ವಲ್ಪ ಕಾಲಾವಕಾಶ ಕೊಡಿ ಎಂದು ವಕೀಲರ ಕೋರಿಕೆ