ಬೆಳಗಾವಿ: ಹಿಂದು ಪರ ಸಂಘಟನೆಯೊಂದು ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಹಾಡುಹಗಲೇ ತಲ್ವಾರ್(ಖಡ್ಗ) ಹಿಡಿದು ಸಂಭ್ರಮಿಸಿದ ಪ್ರಸಂಗ ನಡೆದಿದೆ. ಬೆಳಗಾವಿಯ ಪೀರನವಾಡಿ ಕ್ರಾಸ್ನ ಬ್ರಹ್ಮನಗರದ ಹನುಮಾನ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮಾರಕಾಸ್ತ್ರಗಳೊಂದಿಗೆ ನೃತ್ಯ ಮಾಡುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದುದು ವಿಪರ್ಯಾಸ.
ಆಯುಧ ಪೂಜೆಯ ಅಂಗವಾಗಿ ಬಜರಂಗ ದಳ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತಲ್ವಾರ್ ಸಮೇತವಾಗಿ ಆಗಮಿಸಿದ ಕಾರ್ಯಕರ್ತರು, ನಡು ಬೀದಿಯಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದರು. ಕೆಲವು ಕಾರ್ಯಕರ್ತರು ಇನ್ನೊಬ್ಬರ ಮೇಲೆ ಹತ್ತಿ ಕುಳಿತು ತಲ್ವಾರ್ ಬೀಸುತ್ತಿದ್ದ ದೃಶ್ಯಗಳೂ ಕಂಡುಬಂದವು. ಮಾರಕಾಸ್ತ್ರ ಹಿಡಿದು ಸಂಭ್ರಮಿಸಿದರೂ ಬೆಳಗಾವಿ ಪೋಲಿಸರು ಕೈಕಟ್ಟಿ ಕುಳಿತರೆ, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಆಧಾರ್ ಕಾರ್ಡ್ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ