ಇಂದೋರ್: ಇಂದೋರ್ ನಗರವನ್ನು ಬಿಕ್ಷಟನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ 2025ರ ಜ.1ರಿಂದ ಯಾರಿಗಾದರೂ ಭಿಕ್ಷೆ ಹಾಕುವುದು ಕಂಡು ಬಂದರೆ ಅವರ(ಭಿಕ್ಷೆ ನೀಡುವವರ) ವಿರುದ್ಧ ಎಫ್ಐಆರ್(FIR) ದಾಖಲಿಸಲಾಗುವುದು ಎಂದು ಸೋಮವಾರ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇಂದೋರ್ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ, ಭಿಕ್ಷಾಟನೆಯ ವಿರುದ್ಧ ನಮ್ಮ ಜಾಗೃತಿ ಅಭಿಯಾನ ಇದೇ ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ. ಜ.1ರಿಂದ ಯಾವುದಾದರೂ ವ್ಯಕ್ತಿಗೆ ಬಿಕ್ಷೆ ನೀಡಿವುದು ಕಂಡುಬಂದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಷ್ಟಪಡದವರೂ ಇಷ್ಟಪಡಬೇಕು; “ಮಾರ್ಟಿನ್’ ಸೀಕ್ವೆಲ್ “ರೈನೋ’ ಮಾಡುವ ಬಗ್ಗೆ ಧ್ರುವ ಸರ್ಜಾ ಸ್ಪಷ್ಟನೆ
ಇತ್ತೀಚಿನ ದಿನಗಳಲ್ಲಿ ಬಿಕ್ಷಟನೆ ಬೇಡುವಂತೆ ಮಾಡುವ ವಿವಿಧ ಗ್ಯಾಂಗ್ಗಳಿವೆ ಎಂದು ವರದಿಯಾಗಿದ್ದು, ಕೆಲವರು ಈ ಕುರಿತು ದೂರು ಕೂಡ ಸಲ್ಲಿಸಿದ್ದಾರೆ. ಇಲ್ಲಿನ ಬಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲದೆ, ಅಂತವರು ಕಂಡುಬಂದರೆ ನಮಗೆ ಕಂಪ್ಲೇಂಟ್ ಮಾಡಿ. ಬಿಕ್ಷೆ ನೀಡುವ ಮೂಲಕ ಪಾಪದ ಕಾರ್ಯದಲ್ಲಿ ಪಾಲುದಾರರಾಗದಂತೆ ನಾನು ಇಂದೋರ್ನ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಇಂದೋರ್ ಸೇರಿದಂತೆ ದೇಶದ 10 ನಗರಗಳನ್ನು ಭಿಕ್ಷುಕರ ಮುಕ್ತಗೊಳಿಸಲು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಆಶಿಶ್ ಸಿಂಗ್ ವಿವರಿಸಿದರು,(ಏಜೆನ್ಸೀಸ್).
ಮಹಿಳೆ ಕೊಲೆ ಪ್ರಕರಣವನ್ನೇ ಭೇದಿಸಿತು ಅದೊಂದು ಸಣ್ಣ ಸುಳಿವು! ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ