ಗೌತಮ್​ ಗಂಭೀರ್​ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್​

blank

ಮುಂಬೈ: ಭಾರೀ ಹೈಪ್​ನೊಂದಿಗೆ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ಆಧಿಕಾರ ವಹಿಸಿಕೊಂಡಿದ್ದ ಗೌತಮ್​ ಗಂಭೀರ್​ ಸರಣಿ ಸೋಲುಗಳ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಬಿದ್ದಿದ್ದು, ಇವರನ್ನು ಬದಲಾವಣೆ ಮಾಡುವಂತೆ ಆಗ್ರಹ ಕೇಳಿ ಬರುತ್ತಿದೆ. ಈ ಸಂಬಂಧ ಬಿಸಿಸಿಐ ನಾಯಕ ರೋಹಿತ್​ ಶರ್ಮ ಹಾಗೂ ಗೌತಮ್​ ಗಂಭೀರ್​ರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಸೋಲಿಗೆ ಕಾರಣವಾದ ಅಂಶಗಳನ್ನು ಹುಡುಕುತ್ತಿದೆ. ಗೌತಮ್​ ಗಂಭೀರ್​ ಜತೆಗೆ ಸಹಾಯಕ ಸಿಬ್ಬಂದಿ ಮೇಲೂ ತೂಗುಗತ್ತಿ ನೇತಾಡುತ್ತಿದ್ದು, ಇವರ ಬದಲಾವರಣೆಗೂ ಆಗ್ರಹ ಕೇಳಿ ಬರುತ್ತಿದೆ.

ಗೌತಮ್​ ಗಂಭೀರ್​ ಕೇಳಿದ ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಅದರಂತೆ ಅಭಿಷೇಕ್​ ನಾಯರ್ ಹಾಗೂ ರಿಯಾನ್ ಟೆನ್ ಡೋಸ್ಚೇಟ್​ರನ್ನು ಗಂಭೀರ್​ ಒತ್ತಾಯದ ಮೇಲೆ ನೇಮಿಸಲಾಗಿತ್ತು. ಟೆಸ್ಟ್​ನಲ್ಲಿ ಹೆಚ್ಚು ಅನುಭವ ಹೊಂದಿರುವ ಈ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಇವರ ಬದಲಾವಣೆಗೂ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐನ (BCCI)ಹಿರಿಯ ಅಧಿಕಾರಿ ಹಾಗೂ ಮಾಜಿ ಕ್ರಿಕೆಟಿಗರೊಬ್ಬರು ಮಾತನಾಡಿದ್ದಾರೆ. 

ಈ ಕುರಿತಾಗಿ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಬೌಲಿಂಗ್ ಕೋಚ್ ಮಾರ್ನ್​ ಮಾರ್ಕೆಲ್​ ಹೊರತಾಗಿ ಸಹಾಯಕ ತರಬೇತುದಾರರಾದ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಕೇಟ್ ಅವರು ತರಬೇತಿಯ ಪರಿಣಿತಿಯಲ್ಲಿ ಕೊರತೆಯಿದೆ, ವಿಶೇಷವಾಗಿ ಟೆಸ್ಟ್ ಬಂದಾಗ, ತಂಡದಲ್ಲಿ ಬೆಳೆಯುತ್ತಿರುವ ಅಭಿಪ್ರಾಯವಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತಾಂತ್ರಿಕ ಪರಿಣತಿ ಹೊಂದಿರುವ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸುವ ಅಗತ್ಯವಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Sunil Gavaskar

ಈ ಬಗ್ಗೆ ಮಾತನಾಡಿರುವ ಸುನಿಲ್​ ಗವಾಸ್ಕರ್​, ವಿಭಿನ್ನ ತರಬೇತುದಾರರನ್ನು ಹೊಂದಿರುವ ಅರ್ಹತೆಯ ಬಗ್ಗೆ ನನಗೆ ತಿಳಿದಿಲ್ಲ. ಅದು ನಿಮಗೆ ತಿಳಿದಿದೆ, ನಾವು ವಿಭಿನ್ನ ಸನ್ನಿವೇಶದಲ್ಲಿ ನೋಡಬೇಕಾಗಿದೆ. ನಾನು ಗೌತಮ್​ ಗಂಭೀರ್​ ಮತ್ತು ಅವರ ಕೋಚಿಂಗ್ ಸಿಬ್ಬಂದಿಗೆ ಪ್ರಶ್ನೆಗಳನ್ನು ಕೇಳಬೇಕಿದೆ. ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ಮೊದಲು ಕೇಳಬೇಕಿದೆ ಎಂದು ಸುನಿಲ್​ ಗವಾಸ್ಕರ್ ಪ್ರಶ್ನಿಸಿದ್ದಾರೆ. 

ಚಾಂಪಿಯನ್ಸ್​ ಟ್ರೋಫಿಗೆ ದಿನಗಣನೆ ಆರಂಭವಾಗಿರುವ ಹೊಸ್ತಿಲಲ್ಲೇ ಕೋಚ್​ ಬದಲಾವಣೆ ಬಗ್ಗೆ ಹೆಚ್ಚಾಗಿ ಕೂಗು ಕೇಳಿ ಬರುತ್ತಿದ್ದು, ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಆಧರಿಸಿ ಕೋಚ್​ ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ.

ಟೆಸ್ಟ್​ ಸರಣಿ ಸೋಲಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​; ಚಾಂಪಿಯನ್ಸ್​ ಟ್ರೋಫಿಗೆ Jasprit Bumrah ಅಲಭ್ಯ?

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ; ಶೀಘ್ರ ಗುಣಮುಖರಾಗಲಿ ಎಂದ CT Ravi

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…