19ರಂದು ಗಂಗಾಧರೇಶ್ವರ ರಥೋತ್ಸವ

Gangadhareshwar Rathotsava on 19th

ನಾಲತವಾಡ: ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ಅಂಗವಾಗಿ 4ದಿನಗಳ ಕಾಲ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ. 17ರಿಂದ ಆರಂಭಗೊಳ್ಳಲಿರುವ ಉತ್ಸವದಲ್ಲಿ ಲೊಟಗೇರಿಯ ಡಾ. ಗುರುಮೂರ್ತಿ ಕಣಕಾಲಮಠ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ನವಗ್ರಹ ಶಾಂತಿ ಹಾಗೂ ಹೋಮ ಹಮ್ಮಿಕೊಳ್ಳಲಾಗಿದೆ.

ಫೆ. 18ರಂದು ಕಳಸೋತ್ಸವ ನಡೆಯಲಿದೆ. ಬಲದಿನ್ನಿಯ ಧಣಿಗಳ ನಾಲತವಾಡದ ವಾಡೆಯಿಂದ ಕಳಸದ ಮೆರವಣಿಗೆಗೆ ಶಾಸಕ ನಾಡಗೌಡ ಹಾಗೂ ಸಹೋದರರು ಚಾಲನೆ ನೀಡಲಿದ್ದಾರೆ.ಅಯ್ಯನಗುಡಿಯಲ್ಲಿ ಉಜ್ಜಲಾದೇವಿ ನಾಡಗೌಡ ನೇತೃತ್ವದಲ್ಲಿ ರಾತ್ರಿ 8 ಗಂಟೆಯಿಂದ ತನಾರ್ಥಿ ಸೇವೆ ನಡೆಯಲಿದೆ.

ರಾತ್ರಿ 9ಗಂಟೆಗೆ ಪುರವಂತಿಕೆ, ವೀರಗಾಸೆ ನೃತ್ಯ ನಡೆಯಲಿದೆ. ನಂತರ ಪುಟ್ಟರಾಜ ಗವಾಯಿಗಳ ಕಲಾ ವೇದಿಕೆ ಮುದ್ದೇಬಿಹಾಳದ ಕಲಾ ತಂಡದಿಂದ ಸದಾಶಿವ ಗೋಂಧಳೆ ತಂಡದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ರಾತ್ರಿ 11ಕ್ಕೆ ದೇವರಗಡ್ಡಿ ಮತ್ತು ಹಾಲಬಾವಿಯಿಂದ ದೇವತೆಗಳ ಆಗಮನವಾಗಲಿದೆ.

ಫೆ. 19ರಂದು ಬೆಳಗ್ಗೆ 6ಕ್ಕೆ ರುದ್ರಾಭೀಷೇಕ, ಸಂಜೆ 4.30ರಿಂದ ಗಂಗಾಧರೇಶ್ವರನ ರಥೋತ್ಸವ ಜರುಗುವುದು. ಸಂಜೆ 6 ಗಂಟೆಗೆ ರಸಮಂಜರಿ ಕಾರ್ಯಕ್ರಮವಿದೆ. ರಾತ್ರಿ 8ಗಂಟೆಗೆ ನಾನಾ ಕಾರ್ಯಕ್ರಮಗಳ ಉದ್ಘಾಟನೆ ಜರುಗಲಿದೆ.

ಶಾಸಕ ಸಿ.ಎಸ್. ನಾಡಗೌಡ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕರ್ಣಕುಮಾರ ಜೈನಾಪುರ ಉದ್ಘಾಟಿಸುವರು. ಜನಪದ ಸಾಹಿತಿ ಶಂಕರ ಬೈಚಬಾಳ ಉಪನ್ಯಾಸ ನೀಡುವರು. ರಾತ್ರಿ 10.30ಕ್ಕೆ ಮನೆ ಹೊಕ್ಕ ಮಿಡಿ ನಾಗ ನಾಟಕ ಪ್ರದರ್ಶನಗೊಳ್ಳುವುದು.

ಫೆ. 20ರಂದು ಸಂಜೆ 6ಕ್ಕೆ ಮಸಬಿನಾಳದ ಮೌಲೇಸಾಬ ಮಕಾಂದಾರ ಹಾಗೂ ಅವ್ವಮ್ಮ ಬ್ಯಾಲಿಹಾಳ ಇವರಿಂದ ಗೀಗೀ ಪದಗಳು, ರಾತ್ರಿ 10.30ಕ್ಕೆ ಅಪ್ಪ ಅಪರಂಜಿ ತಂಗಿ ಗುಲಗುಂಜಿ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ. 21ರಂದು ಸಂಜೆ 6 ಗಂಟೆಯಿಂದ ವಾದಿ ಬೀದಿ ಚೌಡಕಿ ಪದಗಳು ನಂತರ ಸಮಾರೋಪ ಸಮಾರಂಭ ನಡೆಯಲಿದೆ ರಾತ್ರಿ 10.30ಕ್ಕೆ ಮನೆ ಮುರುಕ ಅಳಿಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…