ಕೋಟ: ಸಾಲಿಗ್ರಾಮ ಪಾರಂಪಳ್ಳಿ ಪಡುಕರೆ ಶನೀಶ್ವರ ದೇಗುಲ ನಿರ್ಮಾಣಕ್ಕೆ ಸೋಮವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಿದರು.
ಧಾರ್ಮಿಕ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಪ್ರಧಾನ ಅರ್ಚಕ ಜನಾರ್ದನ ಅಡಿಗ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಜಿರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಆನಂದ ಸಿ.ಕುಂದರ್, ದೇವಸ್ಥಾನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸತೀಶ್ ಮೆಂಡನ್, ಸಾಸ್ತಾನ ಬ್ರಹ್ಮಬೈದರ್ಕಳ ಬಿಲ್ಲವ ಸಂಘ ಅಧ್ಯಕ್ಷ ಎಂ.ಸಿ ಚಂದ್ರ ಪೂಜಾರಿ, ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೋಟತಟ್ಟು ಪಂಚಾಯಿತಿ ಸದಸ್ಯ ರವೀಂದ್ರ ತಿಂಗಳಾಯ, ಸ್ಥಳಿಯರಾದ ರತ್ನಾಕರ್ ಪೂಜಾರಿ, ಅಣ್ಣಪ್ಪ ಪೂಜಾರಿ, ದಿನೇಶ್ ಮೊಗವೀರ, ಸುರೇಶ್ ಪೂಜಾರಿ, ಶೀನ ಮರಕಾಲ, ಗಿರೀಶ್ ಪೂಜಾರಿ, ಸಿದ್ಧಿ ಶ್ರೀನಿವಾಸ ಪೂಜಾರಿ, ನರಸಿಂಹ ಪೂಜಾರಿ, ದೇವಸ್ಥಾನದ ಶಿಲ್ಪಿ, ಅಶೋಕ ಕುಂದರ್, ಜಬ್ಬ ಮೆಂಡನ್, ಕೃಷ್ಣ ಶ್ರೀಯಾನ್, ರಾಮ ಬಂಗೇರ, ರಾಜು ಮರಕಾಲ, ದರ್ಶನ್ ಬಂಗೇರ, ರಾಜು ಪೂಜಾರಿ, ದೇವ ಮರಕಾಲ, ಅಶೋಕ, ಭಕ್ತರು ಉಪಸ್ಥಿತರಿದ್ದರು.