ಮೀನುಗಾರರ ಸಹಕಾರಿ ಸಂಘದ ಚುನಾವಣೆ

blank

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಪದ್ಧತಿಯ ಮೀನುಗಾರರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿದಂತಾಗಿದ್ದು, ಪರಿಶಿಷ್ಟ ಜಾತಿ ಮೀನುಗಾರರನ್ನು ಚುನಾವಣೆಯಿಂದ ದೂರ ಇಟ್ಟು ಮೀಸಲು ಸ್ಥಾನಕ್ಕೆ ಮತದಾನ ಮಾಡುತ್ತಿರುವ ಕಾರಣ ಅಸ್ಪಶ್ಯತೆ ನಿವಾರಣೆ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಗರ್ಜನೆ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಆಗ್ರಹಿಸಿದರು.

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಎ ದರ್ಜೆ ಸದಸ್ಯತ್ವ ನೀಡಲು ನಿರಾಕರಿಸಿದ್ದು, ಇದನ್ನು ವಿರೋಧಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನುಗಾರರ ಒಕ್ಕೂಟದಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಜತೆ ಮಾತುಕತೆ ನಡೆಸಿದ್ದು, ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಜಗದೀಶ್ ಗಂಗೊಳ್ಳಿ, ವಕೀಲ ಆನಂದ ಗಂಗೊಳ್ಳಿ, ಯುವಸೇನಾ ಅಧ್ಯಕ್ಷ ಗಣೇಶ್ ನಗ್ರಿ, ಹರೀಶ್ ಮಲ್ಪೆ, ಮಂಜುನಾಥ ಗುಡ್ಡೆಯಂಗಡಿ, ವಿಜಯ್ ಕೆ.ಎಸ್, ಚಂದ್ರಮ ತಲ್ಲೂರು, ರಾಘವೇಂದ್ರ ಬಾವಿಕಟ್ಟೆ, ಸಂದೇಶ್, ಜಿ. ಪದ್ಮಾವತಿ, ಜಿ.ಟಿ.ವರದಾ, ನಾಗಿಣಿ ಮೊದಲಾದವರು ಇದ್ದರು.

ಕುಕ್ಕಜೆಯಲ್ಲಿ ವಿಶ್ವಕರ್ಮ ಸಮಾಜದ ಮಹಾಸಭೆ

ವಿದ್ಯಾರ್ಥಿ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹ

 

Share This Article

ಚಿನ್ನದ ಆಭರಣಗಳನ್ನು ಧರಿಸುವುದರಿಂದ ಈ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ! Gold benefits

Gold benefits: ಹಬ್ಬವಾಗಲಿ ಅಥವಾ ಮದುವೆ ಸಮಾರಂಭವಾಗಲಿ ಮಹಿಳೆಯರು ಚಿನ್ನದ ಆಭರಣಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ಚಿನ್ನವು…

ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವಾಗ ಯಾವುದೇ ಕಾರಣಕ್ಕೂ ಈ ಮಿಸ್ಟೇಕ್​ ಮಾಡ್ಬೇಡಿ: ಮಾಡಿದ್ರೆ ಆರೋಗ್ಯಕ್ಕೆ ಅಪಾಯ! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪ್ರೀತಿ ವಿಚಾರದಲ್ಲಿ ಸಂಗಾತಿ ಭಾವನೆ ಪರಿಗಣಿಸದೆ ಮೂರ್ಖತನದಿಂದ ವರ್ತಿಸ್ತಾರಂತೆ ಈ 3 ರಾಶಿಯವರು! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಯಲ್ಲಿ ಜನಿಸುತ್ತಾನೆ ಎಂಬುದು…