ಹೈದರಾಬಾದ್: ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗಳಿಗಾಗಿ ಎಷ್ಟು ದೂರ ಹೋಗಬಹುದು ಮತ್ತು ಏನನ್ನಾದರೂ ಮಾಡುತ್ತಾರೆ ಎಂಬುದನ್ನು ನೋಡಿರುತ್ತೇವೆ ಹಾಗೂ ಕೇಳಿದ್ದೇವೆ. ಸೌತ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಅವರ ಕುರಿತು ಹೇಳುವ ಅವಶ್ಯಕತೆಯೇ ಇಲ್ಲ. ಈ ನಟ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್ ಅವರನ್ನು ನೋಡಲೆಂದು ಅಭಿಮಾನಿಯೊಬ್ಬ ಉತ್ತರ ಪ್ರದೇಶದಿಂದ ಹೈದರಾಬಾದ್ಗೆ ಸೈಕಲ್ನಲ್ಲಿ ಪ್ರಯಾಣ ಮಾಡಿದ್ದಾರೆ. ವಿಷಯ ಕೇಳಿ ಭೇಟಿಗೆ ಸಮ್ಮತಿಸಿದ ನಟ ಅಭಿಮಾನಿಯ ಕ್ರೇಜ್ ನೋಡಿ ಶಾಕ್ ಆಗಿದ್ದಾರೆ.
ಇದನ್ನು ಓದಿ: ದೀಪಿಕಾ ಜತೆ ಕೆಲಸ ಮಾಡುವುದು ಸುಲಭ; ನಿರ್ದೇಶಕ ಇಮ್ತಿಯಾಜ್ ಅಲಿ ಹೀಗೆಳಿದ್ದೇಕೆ? | Imtiaz Ali
ಉತ್ತರ ಪ್ರದೇಶದಿಂದ ಬೈಸಿಕಲ್ನಲ್ಲಿ ಬಂದ ತಮ್ಮ ಅಭಿಮಾನಿಯನ್ನು ಅಲ್ಲು ಅರ್ಜುನ್ ಭೇಟಿಯಾಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಅಭಿಮಾನಿಯ ಯೋಗಕ್ಷೇಮ ವಿಚಾರಿಸುತ್ತಿರುವ ಆತ ಅಲ್ಲು ಅರ್ಜುನ್ ಪಾದಗಳನ್ನು ಸ್ಪರ್ಶಿಸಲು ಬಾಗುತ್ತಾನೆ. ಆತನ ಜತೆಗೆ ಅಲ್ಲು ಅರ್ಜುನ್ ಕೂಡ ಬಾಗಿ ಆತನನ್ನು ಮೇಲುತ್ತಾರೆ. ಬಳಿಕ ಆತನನ್ನು ಹೇಗೆ ಬಂದುದ್ದಾಗಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿ ನಾನು ಉತ್ತರ ಪ್ರದೇಶದ ಅಲಿಗಢದಿಂದ ಸೈಕಲ್ನಲ್ಲಿ ಬಂದಿದ್ದೇನೆ ಎಂದು ಹೇಳುತ್ತಾನೆ. ಸುಮಾರು 1600 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಕೇಳಿದ ಅಲ್ಲು ಅರ್ಜುನ್ ಆಶ್ಚರ್ಯಗೊಳ್ಳುವುದನ್ನು ನೋಡಬಹುದು.
ಅಲ್ಲು ಅರ್ಜುನ್ ಫ್ಯಾನ್ನ ಕೈ ಹಿಡಿದು ಅಚ್ಚರಿಯಿಂದ ನೋಡುತ್ತಲೇ ಅಭಿಮಾನಿ ಹೇಳುವುದನ್ನು ಆಲಿಸುತ್ತಾರೆ. ಬಳಿಕ ತಮ್ಮ ತಂಡಕ್ಕೆ ವಿಮಾನ ಅಥವಾ ರೈಲಿನ ಟಿಕೆಟ್ ಕಾಯ್ದಿರಿಸಿ ಆತನನ್ನು ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿ ಅದಕ್ಕೆ ಒಪ್ಪದಿದ್ದಾಗ ತಮ್ಮ ತಂಡಕ್ಕೆ ಕ್ಷೇಮವಾಗಿ ಇತನನ್ನು ಬಸ್ನಲ್ಲಿ ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿಗೆ ಬೈಸಿಕಲ್ನಲ್ಲಿ ಅಲಿಗಢಕ್ಕೆ ಹಿಂತಿರುಗದಂತೆ ವಿನಂತಿಸುತ್ತಾರೆ.
ನಿಮ್ಮನ್ನು ಭೇಟಿ ಮಾಡಿದ್ದೆ ಸಾಕು ಎಂದು ಅಭಿಮಾನಿ ಹೇಳಿದಾಗ ಅಲ್ಲು ಅರ್ಜುನ್ ಫೋಟೋಗಳಿಗೆ ಪೋಸ್ ನೀಡಿ, ಗಿಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಪುಷ್ಪ 2 ಚಿತ್ರದ ಪ್ರಚಾರಕ್ಕಾಗಿ ಉತ್ತರಪ್ರದೇಶಕ್ಕೆ ಬಂದಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
A fan cycled over 1600 km from Aligarh, Uttar Pradesh, to Hyderabad to meet his hero, Icon Star #AlluArjun. Heartfelt scenes!! pic.twitter.com/mEfUwEQJmm
— Aakashavaani (@TheAakashavaani) October 16, 2024
ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ‘ಪುಷ್ಪ: ದಿ ರೂಲ್’ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಅನಸೂಯಾ ಭಾರದ್ವಾಜ್, ಪ್ರಿಯಾಮಣಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)
ನಟಿಯಾಗಬೇಕಿದ್ದರೆ ಇದನ್ನು ಕಲಿಯಲೇಬೇಕು; ಅಜ್ಜ ರಾಜ್ ಕಪೂರ್ ಸಲಹೆ ಕುರಿತು Kareena Kapoor ಮಾತು