ಸ್ಟೈಲಿಶ್​​​​ ಸ್ಟಾರ್​​ ದರ್ಶನಕ್ಕೆ ಬೈಸಿಕಲ್​ನಲ್ಲಿ ಬಂದ ಅಭಿಮಾನಿ; ಯುಪಿ ಫ್ಯಾನ್​​ಗೆ Allu Arjun ಹೇಳಿದ್ದೇನು?

blank

ಹೈದರಾಬಾದ್​​: ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳಿಗಾಗಿ ಎಷ್ಟು ದೂರ ಹೋಗಬಹುದು ಮತ್ತು ಏನನ್ನಾದರೂ ಮಾಡುತ್ತಾರೆ ಎಂಬುದನ್ನು ನೋಡಿರುತ್ತೇವೆ ಹಾಗೂ ಕೇಳಿದ್ದೇವೆ. ಸೌತ್​​ನ ಸ್ಟೈಲಿಶ್​​​​​ ಸ್ಟಾರ್​​ ಅಲ್ಲು ಅರ್ಜುನ್(Allu Arjun)​​ ಅವರ ಕುರಿತು ಹೇಳುವ ಅವಶ್ಯಕತೆಯೇ ಇಲ್ಲ. ಈ ನಟ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್​ ಅವರನ್ನು ನೋಡಲೆಂದು ಅಭಿಮಾನಿಯೊಬ್ಬ ಉತ್ತರ ಪ್ರದೇಶದಿಂದ ಹೈದರಾಬಾದ್‌ಗೆ ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ವಿಷಯ ಕೇಳಿ ಭೇಟಿಗೆ ಸಮ್ಮತಿಸಿದ ನಟ ಅಭಿಮಾನಿಯ ಕ್ರೇಜ್ ನೋಡಿ ಶಾಕ್​ ಆಗಿದ್ದಾರೆ.

ಇದನ್ನು ಓದಿ: ದೀಪಿಕಾ ಜತೆ ಕೆಲಸ ಮಾಡುವುದು ಸುಲಭ; ನಿರ್ದೇಶಕ ಇಮ್ತಿಯಾಜ್ ಅಲಿ ಹೀಗೆಳಿದ್ದೇಕೆ? | Imtiaz Ali

ಉತ್ತರ ಪ್ರದೇಶದಿಂದ ಬೈಸಿಕಲ್‌ನಲ್ಲಿ ಬಂದ ತಮ್ಮ ಅಭಿಮಾನಿಯನ್ನು ಅಲ್ಲು ಅರ್ಜುನ್ ಭೇಟಿಯಾಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಅಭಿಮಾನಿಯ ಯೋಗಕ್ಷೇಮ ವಿಚಾರಿಸುತ್ತಿರುವ ಆತ ಅಲ್ಲು ಅರ್ಜುನ್ ಪಾದಗಳನ್ನು ಸ್ಪರ್ಶಿಸಲು ಬಾಗುತ್ತಾನೆ. ಆತನ ಜತೆಗೆ ಅಲ್ಲು ಅರ್ಜುನ್​​ ಕೂಡ ಬಾಗಿ ಆತನನ್ನು ಮೇಲುತ್ತಾರೆ. ಬಳಿಕ ಆತನನ್ನು ಹೇಗೆ ಬಂದುದ್ದಾಗಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿ ನಾನು ಉತ್ತರ ಪ್ರದೇಶದ ಅಲಿಗಢದಿಂದ ಸೈಕಲ್‌ನಲ್ಲಿ ಬಂದಿದ್ದೇನೆ ಎಂದು ಹೇಳುತ್ತಾನೆ. ಸುಮಾರು 1600 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಕೇಳಿದ ಅಲ್ಲು ಅರ್ಜುನ್​ ಆಶ್ಚರ್ಯಗೊಳ್ಳುವುದನ್ನು ನೋಡಬಹುದು.

ಸ್ಟೈಲಿಶ್​​​​ ಸ್ಟಾರ್​​ ದರ್ಶನಕ್ಕೆ ಬೈಸಿಕಲ್​ನಲ್ಲಿ ಬಂದ ಅಭಿಮಾನಿ; ಯುಪಿ ಫ್ಯಾನ್​​ಗೆ Allu Arjun ಹೇಳಿದ್ದೇನು?

ಅಲ್ಲು ಅರ್ಜುನ್​​ ಫ್ಯಾನ್‌ನ ಕೈ ಹಿಡಿದು ಅಚ್ಚರಿಯಿಂದ ನೋಡುತ್ತಲೇ ಅಭಿಮಾನಿ ಹೇಳುವುದನ್ನು ಆಲಿಸುತ್ತಾರೆ. ಬಳಿಕ ತಮ್ಮ ತಂಡಕ್ಕೆ ವಿಮಾನ ಅಥವಾ ರೈಲಿನ ಟಿಕೆಟ್​​ ಕಾಯ್ದಿರಿಸಿ ಆತನನ್ನು ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿ ಅದಕ್ಕೆ ಒಪ್ಪದಿದ್ದಾಗ ತಮ್ಮ ತಂಡಕ್ಕೆ ಕ್ಷೇಮವಾಗಿ ಇತನನ್ನು ಬಸ್​​​ನಲ್ಲಿ ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿಗೆ ಬೈಸಿಕಲ್​ನಲ್ಲಿ ಅಲಿಗಢಕ್ಕೆ ಹಿಂತಿರುಗದಂತೆ ವಿನಂತಿಸುತ್ತಾರೆ.

ನಿಮ್ಮನ್ನು ಭೇಟಿ ಮಾಡಿದ್ದೆ ಸಾಕು ಎಂದು ಅಭಿಮಾನಿ ಹೇಳಿದಾಗ ಅಲ್ಲು ಅರ್ಜುನ್ ಫೋಟೋಗಳಿಗೆ ಪೋಸ್ ನೀಡಿ, ಗಿಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಪುಷ್ಪ 2 ಚಿತ್ರದ ಪ್ರಚಾರಕ್ಕಾಗಿ ಉತ್ತರಪ್ರದೇಶಕ್ಕೆ ಬಂದಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ‘ಪುಷ್ಪ: ದಿ ರೂಲ್’ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಅನಸೂಯಾ ಭಾರದ್ವಾಜ್, ಪ್ರಿಯಾಮಣಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​​)

ನಟಿಯಾಗಬೇಕಿದ್ದರೆ ಇದನ್ನು ಕಲಿಯಲೇಬೇಕು; ಅಜ್ಜ ರಾಜ್ ಕಪೂರ್​​ ಸಲಹೆ ಕುರಿತು Kareena Kapoor ಮಾತು

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…