ಸೋಲು ಗೆಲುವಿಂದ ಸವಾಲು ಎದುರಿಸಲು ಸಾಧ್ಯ

blank

ಕುಂದಾಪುರ: ಕ್ರೀಡೆಯಲ್ಲಿ ಭಾಗವಹಿಸಿ, ಸ್ಪರ್ಧೆಯಲ್ಲಿ ಸೋಲು ಗೆಲುವನ್ನು ಅನುಭವಿಸಿದರೆ ಜೀವನದಲ್ಲಿ ಬರುವ ಸವಾಲು ಎದುರಿಸಲು ಸಾಧ್ಯ ಎಂದು ಕುಂದಾಪುರ ಉದ್ಯಮಿ ಕೆ.ಆರ್. ನಾಯ್ಕ ಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್, ಮಹಾವಿಷ್ಣು ಯುವಕ ಮಂಡಲ ಹರೇಗೋಡು, ಭದ್ರ ಮಹಾಕಾಳಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ಕಟ್‌ಬೆಲ್ತೂರ್ ಗ್ರಾಪಂ, ಶ್ರೀವತ್ಸ ಕೋಚಿಂಗ್ ಸೆಂಟರ್ ಹರೇಗೋಡು, ನಮ್ಮ ಭೂಮಿ ಸಂಸ್ಥೆ ಹಟ್ಟಿಯಂಗಡಿ ಕನ್ಯಾನ ಹಾಗೂ ಮಾನಸ ಯುವತಿ ಮಂಡಲ ಆಶ್ರಯದಲ್ಲಿ ಹರೆಗೋಡು ಯುವಕ ಮಂಡಲ ವಠಾರದಲ್ಲಿ ಭಾನುವಾರ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿ ಸಂಸ್ಥೆ ನಿರ್ದೇಶಕ ಶ್ರೀನಿವಾಸ ಗಾಣಿಗ, ಪ್ರವೀಣ್ ಕುಮಾರ್ ಶೆಟ್ಟಿ, ಅಶ್ರಫ್, ಅಶೋಕ್ ಕುಮಾರ್ ಕುಂದಾಪುರ, ನರಸಿಂಹ ಗಾಣಿಗ ಹರೆಗೋಡು, ವಕೀಲ ರಾಘವೇಂದ್ರ ಚರಣ್ ನಾವುಡ, ಯುವಕ ಮಂಡಲ ಅಧ್ಯಕ್ಷ ದೀಪಕ್ ಆರ್. ಗಾಣಿಗ, ಯುವತಿ ಮಂಡಲ ಅಧ್ಯಕ್ಷೆ ಗೀತಾ ಸುರೇಶ ದೇವಾಡಿಗ, ಯುವತಿ ಮಂಡಲ ಗೌರವಾಧ್ಯಕ್ಷೆ ಗಂಗಮ್ಮ ಸುಂದರ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ರವೀಶ್ ಡಿ.ಎಚ್. ಸಾಗತಿಸಿದರು. ಲಿಖಿತಾ ದೀಪಕ್ ರಾಜ್ ವಂದಿಸಿದರು. ಪ್ರಸಾದ್ ಆಚಾರ್ಯ ನಿರೂಪಿಸಿದರು.

ಕನ್ನಡಿಗರು ಎಂದೂ ಮರೆಯಲಾಗದ ಕವಿ ಮುದ್ದಣ…

ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ…!!

 

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…