Documentary Controversy | ಕಾಪಿರೈಟ್​ ಪ್ರಕರಣದಲ್ಲಿ ನಯನತಾರಾ ವಿರುದ್ಧ ಧನುಷ್​​ಗೆ ಗೆಲುವು; ಮದ್ರಾಸ್​ ಹೈಕೋರ್ಟ್​ ತೀರ್ಪು ಹೀಗಿದೆ..

blank

ಚೆನ್ನೈ: ಸೌತ್​​​ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಸೆನ್ಸೇಷನಲ್​ ವಿಚಾರ ಆಗಿದ್ದು ಎಂದರೆ ಅದು ನಯನತಾರಾ ಮತ್ತು ಧನುಷ್​ ನಡುವಿನ ವಿವಾದ. ದಶಕಗಳಿಂದ ಚಿತ್ರರಂಗದಲ್ಲಿರುವ ಈ ಇಬ್ಬರ ಸೆಲಿಬ್ರಿಟಿಗಳ ಜಗಳ ವೀಕ್ಷಿಸಿ ಚಿತ್ರರಂಗಕ್ಕೆ ಆಶ್ಚರ್ಯವಾಗಿತ್ತು. ಏಕೆಂದರೆ ಒಂದು ಸಮಯದಲ್ಲಿ ಧನುಷ್​ ಮತ್ತು ನಯನತಾರಾ ಉತ್ತಮ ಸ್ನೇಹಿತರಾಗಿದ್ದರು. ಆದರೆ ಸಾಕ್ಷ್ಯಚಿತ್ರದ ವಿಚಾರಕ್ಕೆ ಆರಂಭವಾದ ವಿವಾದ(Documentary Controversy) ಕೊನೆಗೆ ಕೋರ್ಟ್​ ಮೆಟ್ಟಿಲೇರಿದ್ದು ಎಲ್ಲರಿಗೂ ಗೊತ್ತೆ ಇದೆ.

ಇದನ್ನು ಓದಿ: ಧನುಷ್​ ವಿರುದ್ಧ ಭುಗಿಲೆದ್ದ ಮತ್ತೊಂದು ವಿವಾದ; ಆತನ ನಿಜ ಸ್ವರೂಪ ಇದೇ ಎಂದಿದ್ದೇಕೆ ಲೇಡಿ ಸೂಪರ್​ ಸ್ಟಾರ್​ | Nayanthara

ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಮದುವೆಯ ಸಾಕ್ಷ್ಯಚಿತ್ರಕ್ಕೆ ಅನುಮತಿಯಿಲ್ಲದೆ ‘ನಾನು ರೌಡಿ ದಾನ್’ ಚಿತ್ರದ ದೃಶ್ಯವನ್ನು ಬಳಸಿಕೊಂಡಿದ್ದಾರೆ. ಇದರ ವಿರುದ್ಧ ನಾಯಕ ಧನುಷ್ ನ್ಯಾಯಾಲಯದಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಸಿದರು. ಆದರೆ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ‘ನೆಟ್‌ಫ್ಲಿಕ್ಸ್ ಇಂಡಿಯಾ’ ಧನುಷ್ ಅರ್ಜಿಯನ್ನು ವಜಾಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಅಸಲಿಗೆ ನೆಟ್‌ಫ್ಲಿಕ್ಸ್’ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರ್ ಟೇಲ್’ನಲ್ಲಿ ‘ನಾನೂಮ್ ರೌಡಿ ದಾನ್’ ಚಿತ್ರದ 3 ಸೆಕೆಂಡುಗಳ ದೃಶ್ಯವನ್ನು ಬಳಸಲಾಗಿದೆ ಎಂದು ಧನುಷ್ ಆರೋಪಿಸಿದ್ದಾರೆ. ಅನುಮತಿ ಇಲ್ಲದೇ ಬಳಸಿರುವ ದೃಶ್ಯವನ್ನು 24 ಗಂಟೆಯೊಳಗೆ ತೆಗೆಯದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಧನುಷ್ ಎಚ್ಚರಿಕೆ ನೀಡಿದ್ದರು. ಆದರೆ ಆ ದೃಶ್ಯವನ್ನು ತೆಗೆಯದ ಕಾರಣ ಧನುಷ್ ಕಾನೂನು ಹೋರಾಟಕ್ಕೆ ಸಿದ್ಧರಾದರು.

ಕಳೆದ ನವೆಂಬರ್‌ನಲ್ಲಿ ನಯನತಾರಾ, ಅವರ ಪತಿ ವಿಘ್ನೇಶ್ ಶಿವನ್ ಮತ್ತು ಅವರ ನಿರ್ಮಾಣ ಸಂಸ್ಥೆ ಧನುಷ್ ವಿರುದ್ಧ ಪ್ರಕರಣ ದಾಖಲಿಸಿತ್ತು. ‘ನೆಟ್‌ಫ್ಲಿಕ್ಸ್’ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರ್ ಟೇಲ್’ನಲ್ಲಿ ‘ನಾನೂಮ್ ರೌಡಿ ದಾನ್’ ಚಿತ್ರದ 3 ಸೆಕೆಂಡುಗಳ ದೃಶ್ಯವನ್ನು ಬಳಸಲಾಗಿದೆ ಎಂದು ಧನುಷ್ ಆರೋಪಿಸಿದ್ದಾರೆ. ಅನುಮತಿ ಇಲ್ಲದೇ ಬಳಸಿರುವ ದೃಶ್ಯವನ್ನು 24 ಗಂಟೆಯೊಳಗೆ ತೆಗೆಯದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಧನುಷ್ ಎಚ್ಚರಿಕೆ ನೀಡಿದ್ದಾರೆ. ಆದರೆ ಆ ದೃಶ್ಯವನ್ನು ತೆಗೆದುಕೊಂಡಿರಲಿಲ್ಲ. ಇದರೊಂದಿಗೆ ಧನುಷ್ ಕಾನೂನು ಹೋರಾಟಕ್ಕೆ ಸಿದ್ಧರಾದರು.

ಇದಕ್ಕೂ ಮುನ್ನ ನಯನತಾರಾ ನಟ ಧನುಷ್​​ ನಿಜ ಸ್ವರೂಪ ಇದೇ ಎಂದು ದೂಷಿಸಿ ಮೂರು ಪುಟಗಳ ಸುದೀರ್ಘ ಪತ್ರವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan) 2022ರಲ್ಲಿ ವಿವಾಹವಾದರು. ವಿವಾಹದ ಬಳಿಕ ತಮ್ಮ ಜೀವನದ ವಿಚಾರಗಳನ್ನು ಸೇರಿಸಿದ ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಈ ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಿದ್ದರು. ಆದರೆ ಈ ಮಧ್ಯೆ ಕಾಲಿವುಡ್​ ನಟ ಧನುಷ್​​ ಅನುಮತಿಯಿಲ್ಲದೆ ತಮ್ಮ ಸಿನಿಮಾದ ಕ್ಲಿಪ್​ ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿ 10 ಕೋಟಿ ಪರಿಹಾರ ಕೇಳಿದ್ದಾರೆ ಎಂದು ಆರೋಪಿಸಿ ನಟಿ ನಯನತಾರಾ ತಿಳಿಸಿದ್ದರು.

2015ರಲ್ಲಿ ಧನುಷ್ ನಿರ್ಮಾಣದ ನಾನು ರೌಡಿತಾನ್ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸಿದ್ದಾರೆ. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ನಂತರ ನಯನತಾರಾ ಮತ್ತು ಧನುಷ್ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ನಯನತಾರಾ ಅವರ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಧನುಷ್​​​​ ತಮ್ಮ ಸಿನಿಮಾದ ದೃಶ್ಯವನ್ನು ತೆಗೆದುಹಾಕುವಂತೆ ಹೇಳಿದ್ದರು. ಸಾಕ್ಷ್ಯಚಿತ್ರದಲ್ಲಿ ಧನುಷ್ ನಿರ್ಮಿಸಿರುವ ನಾನು ರೌಡಿತಾನ್ ಚಿತ್ರದ ಹಾಡಿನ 3 ಸೆಕೆಂಡುಗಳ ವಿಡಿಯೋವನ್ನು ಬಳಸಲಾಗಿದೆ ಎಂದು ಕಾಪಿರೈಟ್​​​​​​ ಕೇಸ್​ ಹಾಕಿದ್ದರು. ಈ ನಿಟ್ಟಿನಲ್ಲಿ ಧನುಷ್ ನಿರ್ಮಾಣ ಸಂಸ್ಥೆ ‘ವಂಡಬಾರ್ ಫಿಲಂಸ್’ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.

ಧನುಷ್​​ 10 ಕೋಟಿಯನ್ನು ಪರಿಹಾರವಾಗಿ ಕೇಳಿದ್ದಾರೆ ಎಂದು ನಯನತಾರಾ ಧನುಷ್ ಅವರನ್ನು ಟೀಕಿಸಿ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿವಾದ ಮತ್ತಷ್ಟು ತಾರಕಕ್ಕೇರಿತು. ಕಾನೂನು ಹೋರಾಟಕ್ಕೆ ಧನುಷ್ ಮುಂದಾದರು. ಸದ್ಯ ಈ ಪ್ರಕರಣದಲ್ಲಿ ನ್ಯಾಯಾಲಯ ಧನುಷ್ ಪರ ತೀರ್ಪು ನೀಡಿದೆ. ಇದಕ್ಕೆ ನಯನತಾರಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.(ಏಜೆನ್ಸೀಸ್​​)

Dhanush V/S Nayanthara | ಧನುಷ್ ಲೀಗಲ್ ನೋಟಿಸ್‌ಗೆ ಉತ್ತರಿಸಿದ ಲೇಡಿ ಸೂಪರ್​ಸ್ಟಾರ್​​; ನಯನತಾರಾ ವಕೀಲರು ಹೇಳಿದಿಷ್ಟು..

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…