ಜೇನುನೊಣ ಇಲ್ಲ ಅಂದ್ರೆ ಇಡೀ ಮಾನವ ಕುಲವೇ ನಾಶವಾಗುತ್ತೆ: ಈ ಪುಟ್ಟ ಕೀಟಕ್ಕಿದೆ ನಂಬಲಾಗದ ಸಾಮರ್ಥ್ಯ! Bees

Bees

Bees : ಜೇನುನೊಣಗಳು ಉತ್ಪಾದಿಸುವ ಜೇನು ತುಪ್ಪ ತುಂಬಾ ಸಿಹಿಯಾಗಿರಬಹುದು ಆದರೆ, ಅದೇ ಜೇನಿನ ಒಂದೇ ಒಂದು ಕುಟುಕು ಬಹಳ ನೋವು ನೀಡುತ್ತದೆ. ಜೇನು ದಾಳಿಯಿಂದಾಗಿ ಕೆಲವೊಮ್ಮೆ ಪ್ರಾಣವೂ ಹೋಗುತ್ತದೆ. ಈ ಪ್ರಕೃತಿಯಲ್ಲಿ ಜೇನುನೊಣಗಳು ತುಂಬಾನೇ ಮುಖ್ಯ. ಜಗತ್ತಿನಲ್ಲಿ ಸುಮಾರು ಇಪ್ಪತ್ತು ಸಾವಿರ ಜೇನುನೊಣ ಪ್ರಭೇದಗಳಿದ್ದರೂ, ಇಲ್ಲಿಯವರೆಗೆ ನಲವತ್ಮೂರು ಉಪಜಾತಿಗಳನ್ನು ಒಳಗೊಂಡಂತೆ ಎಂಟು ಜೇನುನೊಣ ಪ್ರಭೇದಗಳನ್ನು ಮಾತ್ರ ಗುರುತಿಸಲಾಗಿದೆ.

blank

ಕಟ್ಟಡಗಳು ಮತ್ತು ದೊಡ್ಡ ಮರಗಳಲ್ಲಿ ಗೂಡು ಕಟ್ಟುವ ದೊಡ್ಡ ಜೇನುನೊಣಗಳು, ಮರಗಳಲ್ಲಿಯೇ ಗೂಡು ಕಟ್ಟುವ ಕೋಲು ಜೇನುನೊಣಗಳು, ಪೆಟ್ಟಿಗೆಗಳಲ್ಲಿ ವಾಣಿಜ್ಯಿಕವಾಗಿ ಬೆಳೆಸುವ ಜೇನುನೊಣಗಳು (ಇದರಿಂದ ದೊಡ್ಡ ಜೇನುತುಪ್ಪವನ್ನು ಪಡೆಯಲಾಗುತ್ತದೆ) ಮತ್ತು ಮನೆಗಳ ಅಡಿಪಾಯಗಳು ಸೇರಿದಂತೆ ಸಣ್ಣ ಜಾಗಗಳಲ್ಲಿ ಗೂಡು ಕಟ್ಟುವ ಸಣ್ಣ ಜೇನುನೊಣಗಳು ಇವೆ. ಇವುಗಳಲ್ಲಿ, ಸಣ್ಣ ಜೇನುನೊಣಗಳು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿವೆ. ಅವು ಹೆಚ್ಚಾಗಿ ಔಷಧೀಯ ಸಸ್ಯಗಳಿಂದ ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಸಣ್ಣ ಜೇನುನೊಣಗಳು ಸಹ ಹೆಚ್ಚು ದುಬಾರಿಯಾಗಿರುತ್ತವೆ.

ಆದರೆ, ಈಗ ಹೊಸ ಅಧ್ಯಯನಗಳು ಜೇನುನೊಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿವೆ. 1900 ರಿಂದ ಅಂಕಿ-ಅಂಶಗಳನ್ನು ನೋಡಿದರೆ ಯುಕೆಯಲ್ಲಿ 13 ಜಾತಿಯ ಜೇನುನೊಣಗಳು ಅಳಿವಿನಂಚಿನಲ್ಲಿವೆ ಎಂದು ಅಧ್ಯಯನವು ತೋರಿಸುತ್ತದೆ. ಕೀಟನಾಶಕಗಳು, ಆವಾಸಸ್ಥಾನ ನಷ್ಟ ಮತ್ತು ಹವಾಮಾನ ಬದಲಾವಣೆಯು ಜೇನುನೊಣಗಳ ನಾಶಕ್ಕೆ ಕಾರಣಗಳಾಗಿವೆ.

ಅಂದಹಾಗೆ ನಮ್ಮ ಭೂಮಿಯ ಮೇಲೆ ಜೇನುನೊಣಗಳೇನಾದರೂ ನಾಶವಾದರೆ, ಈ ಭೂಮಿಯಲ್ಲಿ ಮಾನವ ಕುಲವೇ ನಾಶವಾಗಿಬಿಡುತ್ತಾರೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಮನುಷ್ಯರು ಮಾತ್ರವಲ್ಲ, ಇತರ ಜೀವಿಗಳು ಬದುಕಲು ಸಾಧ್ಯವಾಗುವುದಿಲ್ಲ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.

ಜೇನುನೊಣಗಳು ನಾಶವಾದರೆ ಏನಾಗುತ್ತೆ?

ಆಲ್ಬರ್ಟ್ ಐನ್‌ಸ್ಟೀನ್​ ಓರ್ವ ಖ್ಯಾತ ವಿಜ್ಞಾನಿ. ಜಗತ್ತಿನಲ್ಲಿ ಎಲ್ಲಾ ಜೇನುನೊಣಗಳು ಕಣ್ಮರೆಯಾದರೆ, ನಾಲ್ಕು ವರ್ಷಗಳಲ್ಲಿ ಮಾನವ ಜನಾಂಗವೂ ಕಣ್ಮರೆಯಾಗುತ್ತದೆ ಎಂದು ಐನ್​ಸ್ಟೀನ್​ ಹೇಳಿದ್ದಾರೆ. ಹೂವಿನಿಂದ ಹೂವಿಗೆ ಹಾರುವ ಈ ಪುಟ್ಟ ಕೀಟಕ್ಕೆ ಅಂತಹ ಸಾಮರ್ಥ್ಯವಿದೆಯೇ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಆದರೆ ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದು ಸರಿ ಇದೆ. ಅದಕ್ಕೊಂದು ಬಲವಾದ ಕಾರಣವೂ ಇದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರನ್ನು ಕಾಮತೃಷೆಗೆ ಬಳಸಿಕೊಂಡಿದ್ದೇನೆ ಆದ್ರೆ ಎಷ್ಟು ಅಂತ ನೆನಪಿಲ್ಲ ಎಂದ ಲೆಕ್ಚರರ್​: 59 ವಿಡಿಯೋಗಳು ಪತ್ತೆ! College Professor

ಮಾನವಕುಲವನ್ನು ಪೋಷಿಸುವ ಕೃಷಿಯ ಮುಕ್ಕಾಲು ಭಾಗ ಜೇನುನೊಣಗಳ ಮೇಲೆ ಅವಲಂಬಿತವಾಗಿದೆ. ಅನೇಕ ಕೃಷಿ ಬೆಳೆಗಳ ಪರಾಗಸ್ಪರ್ಶ ಮತ್ತು ಸಂತಾನೋತ್ಪತ್ತಿ ಜೇನುನೊಣಗಳು ಸೇರಿದಂತೆ ಕೆಲ ಜೀವಿಗಳ ಸಹಾಯದಿಂದ ನಡೆಸಲ್ಪಡುತ್ತದೆ. ಪರಾಗಸ್ಪರ್ಶ ಸಂಭವಿಸದಿದ್ದರೆ, ಸಸ್ಯ ಸಂತಾನೋತ್ಪತ್ತಿ ನಿಲ್ಲುತ್ತದೆ. ಸಸ್ಯಗಳಿಲ್ಲದೆ, ಅಕ್ಕಿ, ಗೋಧಿ, ಹಲಸು, ಮಾವು, ತರಕಾರಿಗಳು ಮತ್ತು ಹಣ್ಣುಗಳು ಬೆಳೆಯುವುದಿಲ್ಲ. ಇದು ಇತರ ಜೀವಿಗಳ ಆಹಾರ ಪೂರೈಕೆಗೆ ಅಪಾಯವನ್ನುಂಟುಮಾಡುತ್ತದೆ. ಅಂದರೆ, ಆಹಾರದ ಸರಪಳಿಗೆ ಅಡ್ಡಿಯಾಗುತ್ತದೆ.

ಜೇನುನೊಣಗಳು ಹೂವುಗಳಿಂದ ಜೇನುತುಪ್ಪವನ್ನು ಸಂಗ್ರಹಿಸುವುದರ ಜೊತೆಗೆ, ಆಹಾರ ಬೆಳೆಗಳನ್ನು ಪರಾಗಸ್ಪರ್ಶ ಮಾಡಲು ಸಹ ಸಹಾಯ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜೇನುನೊಣಗಳು ಆರೋಗ್ಯಕರ ಪರಿಸರ ವ್ಯವಸ್ಥೆಯ ಆಧಾರವಾಗಿದೆ. ಜೇನುನೊಣಗಳು ಮಾನವಕುಲದ ಆಹಾರದ ಮೂರನೇ ಒಂದು ಭಾಗವನ್ನು ಒದಗಿಸುತ್ತವೆ ಎಂದು ಹೇಳಬಹುದು. ಅದಕ್ಕಾಗಿಯೇ ಜೇನುನೊಣಗಳು ನಾಶವಾದರೆ, ಅದು ಜಗತ್ತಿನ ಎಲ್ಲಾ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಜೇನುನೊಣಗಳ ಅಳಿವನ್ನು ತಡೆಗಟ್ಟಲು ಯುಕೆಯಂತಹ ದೇಶಗಳಲ್ಲಿ ಜೇನುನೊಣ ಸಂರಕ್ಷಣಾ ಸಂಸ್ಥೆಗಳು ಸಹ ಇವೆ. ಕಳೆದ ಕೆಲವು ವರ್ಷಗಳಲ್ಲಿ, ಜೇನುನೊಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬರುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಹೀಗಾಗಿ ಜೇನುನೊಣಗಳ ಉಳಿಯುವಿಕೆಗಾಗಿಯೂ ಪ್ರಯತ್ನಿಸಬೇಕಾಗಿದೆ. (ಏಜೆನ್ಸೀಸ್​)

ಬೆಟ್ಟಿಂಗ್​ ಆ್ಯಪ್​​ ಪ್ರಚಾರ: 5 ಸಾವಿರ ಫಾಲೋವರ್ಸ್​ ಇದ್ರೂ 1 ನಿಮಿಷದ ವಿಡಿಯೋಗೆ ಇಷ್ಟೊಂದು ಹಣ ಸಿಗ್ತಿತ್ತಾ? Betting Promotions

ಹನಿಟ್ರ್ಯಾಪ್​ ವಿಚಾರಕ್ಕೆ ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ: ಸ್ಪೀಕರ್ ಮೇಲೆ ಪೇಪರ್​ ಎಸೆತ​! Honeytrap

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank