ಬೆಂಗಳೂರು: ಭಾರತ-ಪಾಕ್ ಗಡಿಯ ಉದ್ವಿಗ್ನತೆಯಿಂದ ಐಪಿಎಲ್ ಟೂರ್ನಿ ಸ್ಥಗಿತಗೊಳಿಸಿರುವ ಬಿಸಿಸಿಐ, ಟೂರ್ನಿಯ ಉಳಿದ ಪಂದ್ಯಗಳನ್ನು ದಕ್ಷಿಣ ಮತ್ತು ಪೂರ್ವ ಭಾರತದ ನಗರಗಳಲ್ಲಿ ಆಯೋಜಿಸುವ “ಪ್ಲ್ಯಾನ್ ಬಿ’ ಕೂಡ ಸಿದ್ಧಪಡಿಸಿದೆ ಎನ್ನಲಾಗುತ್ತಿದೆ.

ಹಾಲಿ ಯುದ್ಧ ಭೀತಿಯ ನಡುವೆಯೂ ಗಡಿಯಿಂದ ಸಾಕಷ್ಟು ದೂರವಿರುವ ದಕ್ಷಿಣ ಮತ್ತು ಪೂರ್ವ ಭಾರತದ ನಗರಗಳು ಅತ್ಯಂತ ಸುರಕ್ಷಿತವೆನಿಸಿವೆ. ಈ ನಿಟ್ಟಿನಲ್ಲಿ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತದಲ್ಲಿ ಜೈವಿಕ-ಭದ್ರತಾ ವಲಯ ನಿರ್ಮಿಸಿ ಉಳಿದ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಗಳಿವೆ.
ಬಿಸಿಸಿಐ ಮುಂದಿರುವ ಆಯ್ಕೆಗಳು
*ದಕ್ಷಿಣ, ಪೂರ್ವ ಭಾರತದ ನಗರಗಳಿಗೆ ಬಾಕಿ ಪಂದ್ಯಗಳ ಸ್ಥಳಾಂತರ.
*ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ.
*ಯುಎಇ ಅಥವಾ ಇಂಗ್ಲೆಂಡ್ ಅಥವಾ ದ. ಆಫ್ರಿಕಾಕ್ಕೆ ಉಳಿದ ಪಂದ್ಯಗಳ ಸ್ಥಳಾಂತರ.
*ಏಷ್ಯಾಕಪ್ ರದ್ದು ಸಾಧ್ಯತೆಯಿಂದ ಸೆಪ್ಟೆಂಬರ್ನಲ್ಲಿ ಟೂರ್ನಿ ಮರುನಿಗದಿ.
TAGGED:Cricket