ಮಲಬದ್ಧತೆ ಸಮಸ್ಯೆಯೆ ಅಲ್ಲ ಎಂದುಕೊಳ್ಳುವವರು ತಿಳಿದುಕೊಳ್ಳಲೆಬೇಕಾದ ವಿಷಯ ಇದ್ದು. ನಮ್ಮ ಪ್ರಸ್ತುತ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯನ್ನು 90 ಪ್ರತಿಶತದಷ್ಟು ಜನರು ಅನುಭವಿಸುತ್ತಿರುತ್ತಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಮಲಬದ್ಧತೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು.

ಇದನ್ನು ಓದಿ: ತುಪ್ಪದೊಂದಿಗೆ ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಫಾಲೋ ಮಾಡೋದಂತು ಗ್ಯಾರಂಟಿ
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಇತರ ಅನೇಕ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಲಬದ್ಧತೆಯ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹಾರ್ಟ್ಅಟ್ಯಾಕ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಮಲಬದ್ಧತೆ ಇರುವ ರೋಗಿಗಳಿಗೆ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಯಿದೆ ಎಂದು ಕಂಡುಕೊಂಡಿರುವುದು ಬಹಿರಂಗವಾಗಿದೆ.
ಮಲಬದ್ಧತೆ ಉಂಟಾಗಲು ಪ್ರಮುಖ ಕಾರಣ ಎಂದರೆ ನಾವು ಸೇವಿಸುವ ಆಹಾರದಲ್ಲಿ ಕಡಿಮೆ ಫೈಬರ್ ಇರುವುದು ಅಥವಾ ವಯಸ್ಸಾದಂತೆ ಈ ಸಮಸ್ಯೆ ಸಾಮಾನ್ಯವಾಗಿದೆ. ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಮಲಬದ್ಧತೆಗೆ ಕಾರಣವಾಗಬಹುದು.
ಮಲಬದ್ಧತೆ ಸಮಸ್ಯೆ ಮುಂದುವರಿದರೆ ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮಲಬದ್ಧತೆಯಿಂದಾಗಿ ದೇಹದಲ್ಲಿ ಊತವು ಪ್ರಾರಂಭವಾಗುತ್ತದೆ. ಇದು ಇಡೀ ದೇಹದಲ್ಲಿ ಊತವನ್ನು ಉಂಟುಮಾಡಬಹುದು, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡದ ಜತೆಗೆ ಮಲಬದ್ಧತೆ ಹೊಂದಿರುವ ಜನರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಹೃದಯ ಬಡಿತ, ಉಸಿರಾಟ ಮತ್ತು ಜೀರ್ಣಕ್ರಿಯೆ ಸೇರಿದಂತೆ ಅನೇಕ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ದೇಹದಲ್ಲಿನ ವಾಗಸ್ ನರಗಳ ಪ್ರಚೋದನೆಯು ಪ್ರಮುಖ ಪಾತ್ರ ವಹಿಸುತ್ತದೆ. ಮಲಬದ್ಧತೆ ದೀರ್ಘಕಾಲದವರೆಗೆ ಮುಂದುವರಿದರೆ ವಾಗಸ್ ನರವು ಪ್ರಚೋದನೆಯನ್ನು ಪಡೆದು ಸಂಕೇತಗಳನ್ನು ಬಿಡುಗಡೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಹೃದಯ ಬಡಿತವು ಅನಿಯಮಿತವಾಗಬಹುದು ಮತ್ತು ಹೃದಯಾಘಾತವೂ ಸಂಭವಿಸಬಹುದು.
ಅ.5ಕ್ಕೆ ಹರಿಯಾಣ ವಿಧಾನಸಭಾ ಚುನಾವಣೆ ಮತದಾನ ಮುಂದೂಡಿಕೆ; ಚುನಾವಣಾ ಆಯೋಗ ಕೊಟ್ಟ ಕಾರಣ ಹೀಗಿದೆ…