ಲಖನೌ: ತರಗತಿ ವೇಳೆ ಮೊಬೈಲ್ ಬಳಸುತ್ತಿದ್ದದ್ದಾಗ ವಶಪಡಿಸಿಕೊಂಡಿದ್ದಕ್ಕೆ ಕುಪಿತಗೊಂಡ ವಿದ್ಯಾರ್ಥಿಯೋರ್ವ (Student) ಶಿಕ್ಷಕನಿಗೆ (Teacher) ಚಾಕುವಿನಿಂದ ಇರಿದಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್ನ ಮಿಹಿನ್ಪುರವದಲ್ಲಿ ನಡೆದಿದೆ.
ನವಯುಗ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಗಾಯಾಳುವನ್ನು ರಾಜೇಂದ್ರ ಪ್ರಸಾದ್ ವರ್ಮಾ (Teacher) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕೃತ್ಯಕ್ಕೆ ಬಳಸಲಾದ ಚಾಕು ಹಾಗೂ ವಿದ್ಯಾರ್ಥಿಯನ್ನು (Student) ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
बहराइच: मोबाइल चलाने से टीचर ने रोका तो 11वीं के छात्र ने चाकू से कर दिया हमला
◆ टीचर को इलाज के लिए स्वास्थ्य केंद्र में भर्ती कराया गया#Bahraich | #UttarPradesh | Bahraich pic.twitter.com/anQkZ4seGT
— News24 (@news24tvchannel) December 13, 2024
ಘಟನೆ ಬಗ್ಗೆ ಮಾಹಿತಿ ನೀಡಿರುವ ಎಎಸ್ಪಿ ರಮಾನಂದ್ ಪ್ರಸಾದ್ ಕುಶ್ವಾಹ, ಕಾಲೇಜಿನ ಆವರಣದಲ್ಲಿ ಮೊಬೈಲ್ ತರುವುದು ಹಾಗೂ ಅದರ ಬಳಕೆ ನಿಷೇಧಿಸಲಾಗಿದ್ದರು ವಿದ್ಯಾರ್ಥಿಗಳು ಈ ನಿಯಮವನ್ನು ಪಾಲಿಸಿರಲಿಲ್ಲ. ಹೀಗಾಗಿ ಪ್ರಾಧ್ಯಾಪಕ ರಾಜೇಂದ್ರ ಕುಮಾರ್ (Teacher) ವಿದ್ಯಾರ್ಥಿಗಳ (Students) ಬಳಿ ಇದ್ದ ಮೊಬೈಲ್ಗಳನ್ನು ವಶಕ್ಕೆ ಪಡೆದು ತಂದೆ-ತಾಯಿಯನ್ನು ಕಾಲೇಜಿಗೆ ಕರೆದುಕೊಂಡು ಬರುವಂತೆ ತಾಕೀತು ಮಾಡಿದ್ದರು.
ಇದರಿಂದ ಕುಪಿತಗೊಂಡ ವಿದ್ಯಾರ್ಥಿಯೋರ್ವ (Student) ಶಿಕ್ಷಕನ ಹತ್ಯೆ ಮಾಡಲು ಸಂಚು ಹಾಕಿದ್ದು, ಅದರಂತೆ ತರಗತಿಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಬೇರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಾಳುವಿನ ನೆರವಿಗೆ ಧಾವಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಕ್ಷಕ ರಾಜೇಂದ್ರ ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಗಾಯಾಳುವಿನ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಹಾಗೂ ಕೃತ್ಯಕ್ಕೆ ಬಳಸಲಾದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಸ್ಪಿ ರಮಾನಂದ್ ಪ್ರಸಾದ್ ಕುಶ್ವಾಹ ತಿಳಿಸಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು; ಪತ್ನಿ Vijayalakshmi ಪೋಸ್ಟ್ ವೈರಲ್