ಹೈದರಾಬಾದ್: ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿದ್ದ ಚಿರಂಜೀವಿ, ಒಂದು ದೊಡ್ಡ ಗ್ಯಾಪ್ನ ನಂತರ ‘ಖೈದಿ ನಂಬರ್ 150’ ಚಿತ್ರದ ಮೂಲಕ ವಾಪಸ್ಸಾದರು. ಆ ಚಿತ್ರಕ್ಕೆ ಪಡೆದಿದ್ದ ಸಂಭಾವನೆಯ ಡಬ್ಬಲ್ ಸಂಭಾವನೆಯನ್ನು ಹೊಸ ಚಿತ್ರವೊಂದಕ್ಕೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಿನಿಮಾ ತೆರೆ ಕಾಣಲೇಬೇಕು … ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು …
‘ಖೈದಿ ನಂಬರ್ 150’ ಚಿತ್ರಕ್ಕೆ 30 ಕೋಟಿ ಸಂಭಾವನೆಯನ್ನು ಪಡೆದಿದ್ದ ಚಿರಂಜೀವಿ, ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುವುದಕ್ಕೆ 45 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಈ ಎರಡೂ ಚಿತ್ರಗಳನ್ನು ನಿರ್ಮಿಸಿದ್ದು ಅವರ ಮಗ ರಾಮ್ಚರಣ್ ತೇಜ. ಇನ್ನು ಚಿರಂಜೀವಿ ಸದ್ಯ ನಟಿಸುತ್ತಿರುವ ‘ಆಚಾರ್ಯ’ ಚಿತ್ರಕ್ಕೆ 50 ಕೋಟಿ ಸಂಭಾವನೆಯನ್ನು ಪಡೆದಿದ್ದಾರಂತೆ. ಈ ಚಿತ್ರವನ್ನು ರಾಮ್ಚರಣ್ ತೇಜ ಮತ್ತು ನಿರಂಜನ್ ರೆಡ್ಡಿ ನಿರ್ಮಿಸುತ್ತಿದ್ದಾರೆ.
ಇದಲ್ಲದೆ ತಮಿಳಿನ ‘ವೇದಾಳಂ’ನ ತೆಲುಗು ರೀಮೇಕ್ನಲ್ಲಿ ನಟಿಸುತ್ತಿರುವ ಚಿರಂಜೀವಿ, ಆ ಚಿತ್ರದಲ್ಲಿ ನಟಿಸುವುದಕ್ಕೆ 60 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿಗೆ ನಾಲ್ಕೇ ಚಿತ್ರಗಳ ಅಂತರದಲ್ಲಿ ಚಿರಂಜೀವಿ ತಮ್ಮ ಸಂಭಾವನೆಯನ್ನು ಡಬ್ಬಲ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್
‘ವೇದಾಳಂ’ ಚಿತ್ರದ ತೆಲುಗಿನ ರೀಮೇಕ್ನ್ನು ಅನಿಲ್ ಸಂಕರ ನಿರ್ಮಿಸುತ್ತಿದ್ದು, ಮೆಹರ್ ರಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿರಂಜೀವಿ ಅವರ ಸೋದರಿಯ ಪಾತ್ರವನ್ನು ಕೀರ್ತಿ ಸುರೇಶ್ ನಿರ್ವಹಿಸುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ.