ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ಅಕ್ಟೋಬರ್ 15ರಿಂದಲೇ ಅನುಮತಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ಚಿತ್ರಪ್ರದರ್ಶನ ನಡೆಯುತ್ತಿದ್ದರೂ, ಪ್ರೇಕ್ಷಕರು ಮಾತ್ರ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಹೋಗುತ್ತಿಲ್ಲ.
ಈ ನಿಟ್ಟಿನಲ್ಲಿ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಹೊಸ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಕನ್ನಡದ ಪ್ರಮುಖ ಕಲಾವಿದರಾದ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಶ್ರೀಮುರಳಿ, ಗಣೇಶ್, ‘ದುನಿಯಾ’ ವಿಜಯ್, ಧನಂಜಯ್ ಮುಂತಾದವರನ್ನು ಸೇರಿಸಿಕೊಂಡು ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಒಂದು ಭಾವನಾತ್ಮಕ ವಿಡಿಯೋವೊಂದನ್ನು ಮಾಡಿದ್ದಾರೆ.
ಇದನ್ನೂ ಓದಿ: ನಾನು ದೇವದೂತನಲ್ಲ; ನಟ ಸೋನು ಸೂದ್
‘ನೂರು ವರುಷಗಳ ಇತಿಹಾಸವಿರುವ ಸಿನಿಮಾ ಇಂದಲ್ಲ ನಾಳೆ ತೆರೆ ಕಾಣಲೇಬೇಕು … ಚಿತ್ರಮಂದರಿಗಳು ವಿಜೃಂಬಿಸಲೇಬೇಕು …’ ಎಂದು ಪ್ರಾರಂಭವಾಗುವ ಈ ವಿಡಿಯೋದಲ್ಲಿ ಕಳೆದ ಆರೇಳು ತಿಂಗಳುಗಳಿಂದ ಹೇಗೆ ಚಿತ್ರಮಂದಿರಗಳು ಧೂಳುಹಿಡಿದು ಕೂತಿರುವಾಗ, ಲಾಕ್ಡೌನ್ ಮುಗಿದು ಚಿತ್ರಮಂದಿರ ಪುನಃ ತೆರೆಯಲಾಗುತ್ತದೆ. ಲಾಕ್ಡೌನ್ಗೂ ಮೊದಲು ಇದ್ದಂತೆ ಪರಿಸ್ಥಿತಿ ಮರುಕಳಿಸುವುದಕ್ಕೆ ಸಾಧ್ಯವಾ? ಚಿತ್ರಮಂದಿರ ತುಂಬಿದೆ ಎಂಬ ಬೋರ್ಡು, ಸಂಭ್ರಮ, ಪಟಾಕಿ ಇವೆಲ್ಲಾ ಪುನಃ ನೋಡುವುದಕ್ಕೆ ಸಾಧ್ಯವಾ? ಎಂದು ಪ್ರಶ್ನಿಸಿಕೊಳ್ಳುವ ಹೊತ್ತಿಗೆ, ಮೊದಲಿನಿಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ದೃಶ್ಯಗಳನ್ನು ತೋರಿಸಲಾಗಿದೆ.
ಇದನ್ನೂ ಓದಿ: ಓಲ್ಡ್ ಮಾಂಕ್ ಸೆಟ್ನಲ್ಲಿ ದೀಪಾವಳಿ
ನಂತರ, ನಟರಾದ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಶ್ರೀಮುರಳಿ, ಗಣೇಶ್, ಧನಂಜಯ್ ಮತ್ತು ‘ದುನಿಯಾ’ ವಿಜಯ್ ಕಾಣಿಸಿಕೊಂಡು ಚಿತ್ರಮಂದಿರಗಳ ಮಹತ್ವವನ್ನು ಅರ್ಥ ಮಾಡಿಸುತ್ತಾರೆ. ಎಲ್ಲರೂ ಸೇರಿ ಸಿನಿಮಾನ ಸಂಭ್ರಮಿಸೋಣ ಎಂದು ಮುಗಿಯುವ ಈ ವಿಡಿಯೋ, ಯೂಟ್ಯೂಬ್ನ ಕೆಆರ್ಜಿ ಕನೆಕ್ಟ್ಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ನೋಡುಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ.
ಇದನ್ನು ನೋಡಿರುವ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಹ ತಮಗೆ ಅಳು ತಡೆಯಲಾಗುತ್ತಿಲ್ಲ ಎನ್ನುವುದರ ಜತೆಗೆ, ಬನ್ನಿ ಸಿನಿಮಾ ಸಂಭ್ರಮಿಸೋಣ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್