ಚಾಂಪಿಯನ್ಸ್​ ಟ್ರೋಫಿಯಿಂದ ಬುಮ್ರಾ ಔಟ್​; ಜೈಸ್ವಾಲ್​ ಬದಲಿಗೆ 5ನೇ ಸ್ಪಿನ್ನರ್​ಗೆ ಸ್ಥಾನ!

blank

ಬೆಂಗಳೂರು: ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಸಂಪೂರ್ಣ ಚೇತರಿಕೆ ಕಾಣದಿರುವ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಿಂದ ಹೊರಬಿದ್ದಿದ್ದಾರೆ.

ಫೆ.19ರಿಂದ ನಡೆಯಲಿರುವ ಟೂರ್ನಿಗೆ ಬಿಸಿಸಿಐ ಈ ಹಿಂದೆ ಪ್ರಕಟಿಸಿದ್ದ ಭಾರತ ತಂಡದಲ್ಲಿ ಬುಧವಾರ 2 ಬದಲಾವಣೆಗಳನ್ನು ಮಾಡಿದೆ. ಬುಮ್ರಾ ಬದಲಿಗೆ ಯುವವೇಗಿ ಹರ್ಷಿತ್​ ರಾಣಾ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ 5ನೇ ಸ್ಪಿನ್ನರ್​ ಆಗಿ ವರುಣ್​ ಚಕ್ರವರ್ತಿಗೆ ಸ್ಥಾನ ಕಲ್ಪಿಸಲಾಗಿದೆ.

ಉಳಿದಂತೆ 15 ಆಟಗಾರರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಜೈಸ್ವಾಲ್​, ಮೊಹಮದ್​ ಸಿರಾಜ್​ ಮತ್ತು ಶಿವಂ ದುಬೆ ಮೀಸಲು ಆಟಗಾರರಾಗಿ ತಂಡದೊಂದಿಗೆ ದುಬೈಗೆ ಪ್ರಯಾಣಿಸಲಿದ್ದಾರೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ: ರೋಹಿತ್​ ಶರ್ಮ (ನಾಯಕ), ಶುಭಮಾನ್​ ಗಿಲ್​ (ಉಪನಾಯಕ), ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್​​, ಕೆಎಲ್​ ರಾಹುಲ್ (ವಿ.ಕೀ)​, ರಿಷಭ್​ ಪಂತ್ (ವಿ.ಕೀ)​, ಹಾರ್ದಿಕ್ ಪಾಂಡ್ಯ​, ಅಕ್ಷರ್ ಪಟೇಲ್​​, ವಾಷಿಂಗ್ಟನ್​ ಸುಂದರ್, ಕುಲದೀಪ್​ ಯಾದವ್​, ರವೀಂದ್ರ ಜಡೇಜಾ, ವರುಣ್​ ಚಕ್ರವರ್ತಿ, ಹರ್ಷಿತ್ ರಾಣಾ, ಮೊಹಮದ್ ಶಮಿ, ಅರ್ಷದೀಪ್​ ಸಿಂಗ್​.

ಟಿ20 ಲೀಗ್​ಗಳಲ್ಲಿ ಹಾಲಿ ವರ್ಷ ಹೊಸ ತಂಡಗಳ ಗೆಲುವಿನ ಟ್ರೆಂಡ್​! ಐಪಿಎಲ್​ನಲ್ಲೂ ಮುಂದುವರಿಯುತ್ತಾ?

TAGGED:
Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…