Chahal-Dhanashree Divorce | ನಾಳೆಯೇ ಅರ್ಜಿಯ ಅಂತಿಮ ನಿರ್ಧಾರ ನೀಡಿ; ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್​ ಆದೇಶ

blank

ಮುಂಬೈ: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ(Chahal-Dhanashree Divorce) ಸುದ್ದಿಯಿಂದಾಗಿ ಅವರ ಹೆಸರುಗಳು ಕೆಲವು ಸಮಯದಿಂದ ಮುನ್ನೆಲೆಯಲ್ಲಿದೆ. ಈ ಇಬ್ಬರೂ ಸುಮಾರು 5 ವರ್ಷಗಳ ಹಿಂದೆ ವಿವಾಹವಾದರು, ಈಗ ಆ ಸಂಬಂಧ ಮುರಿದು ಬೀಳುವ ಹಂತದಲ್ಲಿದೆ. ವಿಚ್ಛೇದನದ ಕುರಿತು ಇಬ್ಬರೂ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ಬಾಂಬೆ ಹೈಕೋರ್ಟ್ ಈ ಇಬ್ಬರ ವಿಚ್ಛೇದನವನ್ನು ದೃಢಪಡಿಸಿದೆ.

ಇದನ್ನು ಓದಿ: Chahal & Dhanashree Divorce?; ವದಂತಿ ನಡುವೆ ಫೋಟೋಗಳು ಡಿಲೀಟ್​​.. ಇನ್​ಸ್ಟಾಗ್ರಾಮ್​​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿರುವ ದಂಪತಿ

ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನವನ್ನು ಗುರುವಾರ(ಮಾರ್ಚ್​​ 20) ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ(ಮಾರ್ಚ್​ 19) ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಸಮಯದಲ್ಲಿ ಪ್ರಸ್ತುತ ಋತುವಿನಲ್ಲಿ ಪಂಜಾಬ್ ಪರ ಯುಜ್ವೇಂದ್ರ ಚಹಾಲ್ ಅವರು ಆಡುತ್ತಿರುವುದನ್ನು ಕಾಣಬಹುದು. ಇದಾದ ನಂತರ ಅವರು ಮುಂದಿನ ಎರಡು ತಿಂಗಳು ಈ ಪಂದ್ಯಾವಳಿಯಲ್ಲಿ ನಿರತರಾಗಿರುತ್ತಾರೆ. ಚಾಹಲ್ ಅವರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 20ರೊಳಗೆ ವಿಚ್ಛೇದನ ಅರ್ಜಿಯ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಪ್ರಕಾರ ಆರು ತಿಂಗಳ ಕೂಲಿಂಗ್-ಆಫ್ ಅವಧಿಯಲ್ಲಿ ತಮ್ಮ ದಾಂಪತ್ಯ ಕಾಪಾಡಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸದೆ ವಿಚ್ಛೇದನ ಪಡೆಯಲು ಅವಕಾಶ ನೀಡಬೇಕೆಂದು ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯವನ್ನು ಕೋರಿದ್ದರು. ಹೈಕೋರ್ಟ್ 6 ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಸಹ ಮನ್ನಾ ಮಾಡಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B(2)ರ ಪ್ರಕಾರ, ಕುಟುಂಬ ನ್ಯಾಯಾಲಯವು ವಿಚ್ಛೇದನಕ್ಕಾಗಿ ಪರಸ್ಪರ ಅರ್ಜಿಯನ್ನು ಸಲ್ಲಿಸಿದ ಆರು ತಿಂಗಳ ನಂತರವೇ ಪರಿಗಣಿಸಬಹುದು. ಆ ಸಮಯದಲ್ಲಿ ಅವರು ವಿವಾಹದ ಕುರಿತು ಯಾವುದೇ ಇತ್ಯರ್ಥ ಅಥವಾ ಮರುಪರಿಶೀಲನೆ ಸಾಧ್ಯವೇ ಎಂದು ನೋಡಲು ಪ್ರಯತ್ನಿಸಬಹುದು. ಆದರೆ ಇಬ್ಬರ ನಡುವೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲದಿದ್ದರೆ, ಈ ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡಬಹುದು ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಅದರ ಪ್ರಕಾರ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ 6 ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಹೈಕೋರ್ಟ್ ಮನ್ನಾ ಮಾಡಿದೆ.(ಏಜೆನ್ಸೀಸ್​)

ಬಾಡಿ ಶೇಮಿಂಗ್​ ಮಾಡುವ ಉದ್ದೇಶವಲ್ಲ; ರೋಹಿತ್​ ಶರ್ಮಾ ಕುರಿತ ಹೇಳಿಕೆ ಸಮರ್ಥಿಸಿಕೊಂಡ ಶಮಾ ಮೊಹಮ್ಮದ್​​ | Shama Mohamed

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…