Betting Addiction : ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಉದ್ಯೋಗಿಯನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಬಳಿಯ ಭೀಮಿಲಿ ಬೀಚ್ ರಸ್ತೆಯಲ್ಲಿ ನಡೆದಿದೆ.
ಪೊಲೀಸರು ನೀಡಿದ ವಿವರಗಳ ಪ್ರಕಾರ, ಗಾಜುವಾಕ ಪ್ರದೇಶದ ಕೊಂಡ ಸುಂದರ್ (30) ತನ್ನ ಪತ್ನಿ ಮತ್ತು ಮಗಳೊಂದಿಗೆ ಪಿ.ಎಂ.ಪಲೆಮ್ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ರುಶಿಕೊಂಡ ಐಟಿ ಎಸ್ಇಝಡ್ನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಬೆಟ್ಟಿಂಗ್ನಲ್ಲಿ ತೊಡಗುತ್ತಿದ್ದರು. ದಿನಗಳು ಕಳೆದಂತೆ ಅದು ಸ್ವಲ್ಪ ಚಟವಾಗಿ ಮಾರ್ಪಟ್ಟಿತು. ಬೆಟ್ಟಿಂಗ್ನಿಂದಾಗಿ ಸುಮಾರು 21 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ತಮ್ಮ ಸ್ನೇಹಿತರ ಖಾತೆಗಳಲ್ಲಿ ಬ್ಯಾಂಕ್ಗಳಿಂದ ಸಾಲವನ್ನು ಸಹ ಪಡೆದಿದ್ದರು. ಸಾಲ ಮರುಪಾವತಿಸುವ ಒತ್ತಡ ಹೆಚ್ಚಾದ್ದರಿಂದ ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದರು.
ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಸುಂದರ್ ಹೊರಟುಹೋದ. ಸ್ವಲ್ಪ ಸಮಯದ ನಂತರ, ಅಪ್ಪಾ, ನನ್ನನ್ನು ಕ್ಷಮಿಸಿ, ನಿಮಗೆ ಮುಖ ತೋರಿಸಲು ನನ್ನಿಂದ ಸಾಧ್ಯವಿಲ್ಲ. ನಾನು 21 ಲಕ್ಷ ರೂ. ಸಾಲ ಮಾಡಿದ್ದೇನೆ. ನಾನು ಎಷ್ಟೇ ಪ್ರಯತ್ನಿಸಿದರೂ ಸಾಲ ತೀರಿಸಲು ಸಾಧ್ಯವಿಲ್ಲ. ನನ್ನ ಹೆಂಡತಿ ಮತ್ತು ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ಸಾಯುತ್ತೇನೆ ಎಂದು ಹೇಳಿ ಸೆಲ್ಫಿ ವಿಡಿಯೋ ತೆಗೆದು ತಂದೆಗೆ ಕಳುಹಿಸಿದ್ದ. ಅದನ್ನು ನೋಡಿದ ಅವರ ತಂದೆ ತಕ್ಷಣ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿ, ಪೊಲೀಸರಿಗೆ ವಿಡಿಯೋ ಕಳುಹಿಸಿದರು.
ಸುಂದರ್ ತಂದೆ ಕಳುಹಿಸಿದ ವಿಡಿಯೋದಲ್ಲಿರುವ ಬ್ಯಾಕ್ಗ್ರೌಂಡ್ ಆಧಾರದ ಮೇಲೆ, ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ ಭೀಮಿಲಿ ಬೀಚ್ ರಸ್ತೆಯಲ್ಲಿರುವ ರಾಮನಾಯ್ಡು ಫಿಲ್ಮ್ ಸ್ಟುಡಿಯೋ ಬಳಿಯ ಬೀಚ್ಗೆ ತಲುಪಿದರು. ಈ ವೇಳೆ ಸುಂದರ್ ಮರದ ಕೆಳಗೆ ಕುಳಿತು ಅಳುತ್ತಿದ್ದ. ಬಳಿಕ ಆತನನ್ನು ಠಾಣೆಗೆ ಕರೆದೊಯ್ದರು. ಆತ್ಮಹತ್ಯೆಗೆ ಯತ್ನಿಸಿದ ಕಾರಣಗಳನ್ನು ಪೊಲೀಸರು ತಿಳಿದುಕೊಂಡು, ಸುಂದರ್ಗೆ ಸಲಹೆ ನೀಡಿ ಆತನ ಪಾಲಕರಿಗೆ ಒಪ್ಪಿಸಿದರು. ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಜಾಗರೂಕರಾಗಿ ಸುಂದರ್ನನ್ನು ಬಹಳ ಕಡಿಮೆ ಸಮಯದಲ್ಲಿ ಗುರುತಿಸಿ ಆತನ ಜೀವವನ್ನು ಉಳಿಸಿದ್ದಕ್ಕಾಗಿ ಸಿಐ ಬಾಲಕೃಷ್ಣ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದರು.
ಬೇಸಿಗೆಯ ಸೂಪರ್ಫುಡ್ ಅಂದ್ರೆ ಅದು ಬೀಟ್ರೂಟ್: ತಿಂದ್ರೆ ಇಷ್ಟೆಲ್ಲ ಆರೋಗ್ಯ ಲಾಭಗಳು ನಿಮಗೆ ಸಿಗುತ್ತವೆ! Beetroot