More

    ಭೀಕರ ಅಪಘಾತದಲ್ಲಿ ಪ್ರಾಣಕಳೆದುಕೊಂಡ ಕಿರುತೆರೆ ನಟಿ

    ಬಾರಾನಗರ: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಾಲಿ ನಟಿಯೊರ್ವಳು ಮೃತಪಟ್ಟಿದ್ದಾಳೆ. ಈ ದುರ್ಘಟನೆಯು ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಬಾರಾನಗರದಲ್ಲಿ ನಡೆದಿದ್ದು, ನಟಿ ಸುಚಂದ್ರಾ ದಾಸ್‌ಗುಪ್ತ ಮೃತಪಟ್ಟಿದ್ದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸೈಬರ್ ದಾಳಿ: ಬೈಕ್​ಗಳ ಉತ್ಪಾದನೆ ನಿಲ್ಲಿಸಿದ ಸುಜುಕಿ

    ಸುಚಂದ್ರಾ ದಾಸ್‌ಗುಪ್ತ ಹಲವಾರು ಜನಪ್ರಿಯ ಬಂಗಾಳಿ ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಿಸುವುದರ ಜತೆಗೆ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿ ಜನಪ್ರಿಯತೆಯನ್ನು ಗಳಿಸಿದ್ದರು.

    ಶೂಟಿಂಗ್ ನಂತರ, ನಟಿಯು ಶನಿವಾರ ರಾತ್ರಿ ಮನೆಗೆ ಮರಳಲು ಅಪ್ಲಿಕೇಶನ್ ಆಧಾರಿತ ಬೈಕ್ ರೈಡ್​ ಬುಕ್ ಮಾಡಿ ಅಲ್ಲಿಂದ ಹೊರಟಿದ್ದಾರೆ. ಈ ನಡುವೆ ಸೈಕಲ್​ ಸವಾರನೊಬ್ಬ ಇದ್ದಕ್ಕಿದ್ದಂತೆ ಬೈಕ್ ಮುಂದೆ ಬಂದಿದ್ದರಿಂದ ಚಾಲಕ ಬ್ರೇಕ್​ ತುಳಿದಿದ್ದಾನೆ. ಒಮ್ಮಿಂದೊಮ್ಮೇಲೆ ಬ್ರೇಕ್​ ತುಳಿದ ಪರಿಣಾಮ ನಟಿಯು ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಆಕೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮರಣ ಹೊಂದಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.(ಏಜೆನ್ಸೀಸ್​)

    https://www.vijayavani.net/heavy-rain-in-bengaluru-6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts