ರಿಷಿಕೇಶ: ರಿವರ್ ರಾಫ್ಟಿಂಗ್ ಸ್ಪರ್ಧೆ ವೇಳೆ ಉಭಯ ತಂಡಗಳ ನಡುವೆ ಹೊಡೆದಾಟ ಸಂಭವಿಸಿರುವ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹೊಡೆದಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ವಿಡಿಯೋ ವೈರಲ್
ಪ್ರತಿವರ್ಷ ಉತ್ತರಾಖಂಡದ ರಿಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ಸ್ಪರ್ಧಿಗಳು ಆಗಮಿಸುತ್ತಾರೆ.
ಗಂಗಾ ನದಿಯ ಶಿವಪುರಿ ಕಡೆಯಿಂದ ಬಂದು ಮುನಿಕಿರೆಟಿಯ ಕಡೆಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು ಉಭಯ ತಂಡದ ಸದಸ್ಯರು ರಾಫ್ಟಿಂಗ್ ಪ್ಯಾಡ್ಗಳಿಂದ ಬಡಿದಾಡಿಕೊಂಡಿದ್ದಾರೆ.
ಇದನ್ನೂ ಓದಿ: ನೂತನ ಸಿಎಂ ಪದಗ್ರಹಣ; ಉಳುಕಿತು ಸಮಾರಂಭಕ್ಕೆ ಬಂದಿದ್ದ ನಟ ಶಿವರಾಜ್ಕುಮಾರ್ ಕಾಲು
ಮುಳುಗಿ ಹೋಗುತ್ತೇವೆ
ಈ ವೇಳೆ ತಂಡದ ಸದಸ್ಯರೊಬ್ಬರು ದೋಣಿಯನ್ನು ಬದಿಗೆ ನಿಲ್ಲಿಸಿ ಇಲ್ಲವಾದಲ್ಲಿ ನಾವೆಲ್ಲರೂ ಮುಳುಗಿ ಹೋಗುತ್ತೇವೆ ಎಂದು ಕೂಗಿಕೊಳ್ಳುತ್ತಿರುವುದನ್ನು ನಾವು ವಿಡಿಯೋ ದಲ್ಲಿ ಕೇಳಬಹುದಾಗಿದೆ.
ಘಟನೆಯ ಕುರಿತು ಪೊಲೀಸ್ ಅಧಿಕಾರಿಗಳು ಹಾಗೂ ಸ್ಪರ್ಧೆಯ ಆಯೋಜಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.