ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ತಾಯಿಯನ್ನು ಇರಿದು ಗಾಯಗೊಳಿಸಿದ ಉಪ್ಪಳ ಮಣಿಮುಂಡದ ಶೇಕ್ಆದಂ ಕೋಟ್ಟೇಜ್ ನಿವಾಸಿ ಅಶ್ರಫ್ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಇಲ್ಲಿನ ನಿವಾಸಿ ಶಮೀವಾಭಾನು ಅವರಿಗೆ ಪುತ್ರ ಅಶ್ರಫ್ಖಾನ್ ಶುಕ್ರವಾರ ಇರಿದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಗನಕ್ಕೇರಿದ ಸೀಯಾಳ ಬೆಲೆ!: ಬೇಡಿಕೆಯಿದ್ದರೂ, ಪೂರೈಕೆಯಿಲ್ಲದೆ ಜನತೆ ಕಂಗಾಲು