ಮಗಳು ಇರಾಳನ್ನು ಅಪ್ಪಿ ಸಂತೈಸಿದ ಅಮೀರ್​ ಖಾನ್​​; ವಿಡಿಯೋ ನೋಡಿ ಹೊಸ ತಾಯಿ ಇಷ್ಟವಾಗಲಿಲ್ಲವೇ ಎಂದ ನೆಟ್ಟಿಗರು | Aamir Khan

ಮುಂಬೈ: ಬಾಲಿವುಡ್​ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಮೀರ್​ ಖಾನ್(Aamir Khan)​​ ತಮ್ಮ 60ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಗೌರಿ ಸ್ಪ್ರಾಟ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಸದ್ಯ ಇದು ಸಿನಿರಂಗದಲ್ಲಿ ಚರ್ಚೆಯ ಹಾಟ್​ ಟಾಪಿಕ್​ ಆಗಿದೆ.

ಇದನ್ನು ಓದಿ: ಬಾಲಿವುಡ್​ ಪರ್ಫೆಕ್ಷನಿಸ್ಟ್​​ ಹೆಸರು ಕೇಳಿದ ತಕ್ಷಣ ಸಿನಿಮಾ ನಿರಾಕರಿಸಿದ ಕಾಜೋಲ್​​​​​; ನನ್ನ ನಿರ್ಧಾರ ಸರಿ ಎಂದಿದ್ದೇಕೆ? | Aamir Khan

ಅಂದ್ಹಾಗೆ ಗೌರಿಯನ್ನು ಮಾಧ್ಯಮಗಳಿಗೆ ಪರಿಚಯಿಸುವಾಗ ಅಮೀರ್​ ಖಾನ್​​ ತನ್ನ ಮಕ್ಕಳು ಈ ಸಂಬಂಧದಿಂದ ಸಂತೋಷವಾಗಿದ್ದಾರೆ ಮತ್ತು ಕುಟುಂಬವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿತು ಎಂದು ಹೇಳಿದ್ದರು. ಆದರೆ ಏತನ್ಮಧ್ಯೆ ಅಮೀರ್​​ ಅವರ ಪುತ್ರಿ ಇರಾ ಖಾನ್ ಅವರ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಅವರು ಅಳುತ್ತಿರುವುದನ್ನು ನೋಡಬಹುದು.

ಇರಾ ಅವರ ತಂದೆ ಅಮೀರ್ ಖಾನ್ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರ ಕಣ್ಣುಗಳಲ್ಲಿ ನೀರು ಇರುವುದು ಹಾಗೂ ಮುಖದಲ್ಲಿ ದುಃಖದಿಂದ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇರಾಳನ್ನು ನೋಡಿದ ನಂತರ ಅಮೀರ್​​ ಸ್ವತಃ ಆಶ್ಚರ್ಯ ಮತ್ತು ಅಸಮಾಧಾನಗೊಂಡಂತೆ ಕಾಣುತ್ತಿದ್ದರು.

 

View this post on Instagram

 

A post shared by Instant Bollywood (@instantbollywood)

 

View this post on Instagram

 

A post shared by Viral Bhayani (@viralbhayani)

ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆಗೆ ಹೊಸ ತಾಯಿ ಇಷ್ಟವಾಗಲಿಲ್ಲ ಎಂದು ತೋರುತ್ತಿದೇ?, ಆಕೆಗೆ ಮೂರನೇ ತಾಯಿ ಸಿಕ್ಕಿದ್ದಾಳೆ, ಹೊಸ ತಾಯಿ ಬರುತ್ತಿದ್ದಾಳೆ ಎಂಬ ಸಂತೋಷದ ಕಣ್ಣೀರು, ಇರಾಗೆ ಗೌಪ್ಯತೆ ನೀಡಿ, ದುಃಖದಲ್ಲಿರುವವರನ್ನು ಸೆರೆಹಿಡಿಯುವುದು ಸೂಕ್ತವೇ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ಖಾನ್​ ತ್ರಯರಿಗಿಂತ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಬಿಟೌನ್​​ನ ಮತ್ತೋರ್ವ ಖಾನ್​​; ₹ 25000 ಕೋಟಿ ಕಲೆಕ್ಷನ್​​​ | Bollywood

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…