ಮಾ.22ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಜೀವಿಕ ತಂಡದ ಅಲ್ಲಮನ ಬಯಲಾಟ

blank

ಬೆಂಗಳೂರು: ವಿಭಿನ್ನ ಪ್ರದರ್ಶನಗಳ ಮೂಲಕ ರಂಗವಿಮರ್ಶಕರ ಗಮನ ಸೆಳೆದಿರುವ ಆಜೀವಿಕ ತಂಡ ಪ್ರಸ್ತುತ ಪಡಿಸುತ್ತಿರುವ ನೂತನ ಪ್ರಯೋಗ ಅಲ್ಲಮನ ಬಯಲಾಟ ಮಾ.22ಕ್ಕೆ ಪ್ರದರ್ಶನಗೊಳ್ಳಲಿದೆ.

blank

ಬೆಳಕಿನ ಕಾಯಕ್ಕೆಂಥ ನಿದ್ದೆ? ಬಯಲು ನಿದ್ರಿಸುವುದುಂಟೆ ಎಂಬ ಅಲ್ಲಮನ ಬೆಡಗಿನ ವಚನ ಶೈಲಿಯನ್ನೆ ಟ್ಯಾಗ್‌ಲೈನ್ ಆಗಿ ಬಳಸುವ ಮೂಲಕ ರಂಗಾಸಕ್ತರ ಗಮನ ಸೆಳೆದಿರುವ ಆಜೀವಿಕ ತನ್ನ ಪ್ರತಿ ಪ್ರಯೋಗದ ಬಗ್ಗೆ ಹೊಸತೊಂದು ಚರ್ಚೆ ಹುಟ್ಟು ಹಾಕಿದೆ. ಅಲ್ಲಮನ ಗಂಭೀರ ತಾತ್ವಿಕ ಚಿಂತನೆ, ತಾಕಲಾಟ, ವೈರುಧ್ಯ, ಬೆಡಗುಗಳ ಜಿಜ್ಞಾಸೆಗಳ ಪಲ್ಲಟಮೇಲಾಟಗಳನ್ನು ಹೊರಣವಾಗಿಸಿಕೊಂಡಿರುವ ಅಲ್ಲಮನ ಬಯಲಾಟ ನಾಟಕವು ಹೊಸ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ.

ಲಕ್ಷ್ಮೀಪತಿ ಕೋಲಾರ ರಚಿಸಿರುವ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಡಾ.ಉದಯ್ ಸೋಸಲೆ ಮಾಡಿದ್ದಾರೆ. ಹನುಮಂತ ಮಂಡ್ಯ ಸಂಗೀತ, ಮಹದೇವಸ್ವಾಮಿ ಬೆಳಕು, ಮೋಹನಕುಮಾರ್ ಪ್ರಸಾಧನ ಮಾಡಿದ್ದಾರೆ. ಮಾ.22ರಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಕಾಣಲಿದೆ.

ಪುನೀತ್ ಕೇವಲ ನಟರಲ್ಲ, ಸ್ಪೂರ್ತಿಯ ಚಿಲುಮೆ; ಕೆಂಗೇರಿಯಲ್ಲಿ ಅಪ್ಪು ಜನ್ಮದಿನಾಚರಣೆ

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank