ದೋಣಿ ಕೈಕೊಟ್ಟು ಸಮುದ್ರದಲ್ಲಿ ಸಿಲುಕಿದ್ದ ಬೆಸ್ತರು: 19 ಮಂದಿ ರಕ್ಷಣೆ

Ksd_fisherman

ಕಾಸರಗೋಡು: ನಾಡದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಯಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸಮುದ್ರ ಮಧ್ಯೆ ಸಿಲುಕಿದ್ದ 19 ಮೀನುಗಾರರನ್ನು ಕಾಸರಗೋಡು ಮೆರೈನ್ ಎನ್‌ಫೋರ್ಸ್‌ಮೆಂಟ್ ತಂಡ ರಕ್ಷಿಸಿದೆ.

ಚೆರ್ವತ್ತೂರು ಅಳಿವೆ ಮೂಲಕ 19 ಮೀನುಗಾರರ ತಂಡ ಮೀನುಗಾರಿಕೆಗೆ ತೆರಳಿದ್ದು, ಮಾಹೆಯಿಂದ ಹತ್ತು ಕಿ.ಮೀ ದೂರ ಸಂಚರಿಸಿದಾಗ ದೋಣಿಯ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ. ಬಿರುಸಿನ ಮಳೆಯಾಗುತ್ತಿದ್ದ ಕಾರಣ ಮೀನುಗಾರರು ಕಾಸರಗೋಡಿನ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದರು. ಮೆರೈನ್ ಇಲಾಖೆ ಸಹಾಯಕ ನಿರ್ದೇಶಕಿ ಪಿ.ವಿ.ಪ್ರೀತಾ ಅವರ ನಿರ್ದೇಶನದ ಮೇರೆಗೆ ಮೆರೈನ್ ರೆಸ್ಕೂೃ ಯೂನಿಟ್ ಬೋಟ್‌ನಲ್ಲಿ ತೆರಳಿ ದೋಣಿಯಲ್ಲಿ ಸಿಲುಕಿಕೊಂಡಿದ್ದ ಎಲ್ಲ 19 ಮಂದಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ. ದೋಣಿಯನ್ನೂ ದಡ ತಲುಪಿಸಲಾಗಿದೆ.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…