ಮನೆಗೆ ನುಗ್ಗಿ ಮಕ್ಕಳನ್ನು ಎಳೆದೊಯ್ಯುತ್ತಿರುವ ತೋಳಗಳು! 9 ಮಂದಿ ಬಲಿ, ಗ್ರಾಮಗಳನ್ನು ಆವರಿಸಿದ ಭಯ

Wolf Attack

ಲಖನೌ: ತೋಳಗಳ ಭಯದಿಂದ ಉತ್ತರ ಪ್ರದೇಶದ ಕೆಲ ಗ್ರಾಮಗಳು ತತ್ತರಿಸಿವೆ. ರಾಜ್ಯದ ಮಹಾಸಿ ಉಪ ವಲಯದ ವ್ಯಾಪ್ತಿಯ ಬಹ್ರೈಚ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತೋಳಗಳ ಹಿಂಡಿನ ದಾಳಿಯ ಭೀತಿಯಿಂದ ಜನರು ನಿದ್ರೆಯಿಲ್ಲದೆ, ಭಯದಿಂದ ದಿನದೂಡುತ್ತಿದ್ದಾರೆ.

ತೋಳಗಳ ಹಿಂಡು ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಮಕ್ಕಳನ್ನು ಹಿಡಿದು, ಕಾಡಿಗೆ ಎಳೆದೊಯ್ಯುತ್ತಿವೆ ಎಂದು ದೂರು ದಾಖಲಾಗಿದೆ. ಇದುವರೆಗೂ 8 ಮಕ್ಕಳ ಮೇಲೆ ತೋಳಗಳು ದಾಳಿ ನಡೆಸಿ ಕೊಂದಿವೆ. 45 ದಿನಗಳಲ್ಲಿ 8 ಮಕ್ಕಳು ಮತ್ತು ಓರ್ವ ಮಹಿಳೆ ಸೇರಿ 9 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ತೋಳಗಳ ದಾಳಿಯಿಂದ 26 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಭಾರತ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ನಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ಕಳೆದ 40 ದಿನಗಳಲ್ಲಿ ಸುಮಾರು 30 ದಾಳಿಗಳು ನಡೆದಿವೆ. ಮನೆಗಳಲ್ಲಿ ಮಲಗಿರುವ ಮಕ್ಕಳ ಮೇಲೆ ತೋಳಗಳು ದಾಳಿ ಮಾಡಿ ಏಕಾಂತ ಸ್ಥಳಗಳಿಗೆ ಎಳೆದುಕೊಂಡು ಹೋಗುತ್ತಿವೆ. ಅರಣ್ಯ ಇಲಾಖೆ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಾತ್ರಿ ಗಸ್ತು ತಿರುಗುತ್ತಿದ್ದು, ಇದನ್ನ ಅರಿತ ತೋಳಗಳು ತಮ್ಮ ದಾಳಿಯ ಮಾದರಿಯನ್ನು ಬದಲಾಯಿಸಿವೆ ಎಂದು ಸಿಂಗ್ ತಿಳಿಸಿದರು.

ವರದಿಯ ಪ್ರಕಾರ ಜುಲೈ 17 ರಂದು ಮೊದಲ ದಾಳಿ ನಡೆದಿದ್ದು, ಬಹ್ರೈಚ್‌ನ ಮಹಾಸಿ ಬ್ಲಾಕ್ ಬಳಿಯ 30 ಹಳ್ಳಿಗಳ ಜನರು ಭಯದ ಭೀತಿಯಲ್ಲಿ ನಿತ್ಯವೂ ಬದುಕು ನಡೆಸುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಸಹ ಜನರು ಹೆದರುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಗುಂಪು ಗುಂಪಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ತೋಳಗಳ ಭಯದಿಂದ ಏಕಾಂಗಿಯಾಗಿ ಇರಲು ಸಹ ಭಯಪಡುವಂತಾಗಿದೆ.

ಇನ್ನು ಥರ್ಮಲ್ ಡ್ರೋನ್‌ಗಳ ಸಹಾಯದಿಂದ ತೋಳಗಳನ್ನು ಹಿಡಿಯಲು ಉತ್ತರ ಪ್ರದೇಶದ ಅರಣ್ಯ ಇಲಾಖೆಯು ಒಂಬತ್ತು ಸದಸ್ಯರ ತಂಡವನ್ನು ನಿಯೋಜಿಸಿದ್ದು, ಇದುವರೆಗೆ ಹಿಡಿದ ಮೂರು ತೋಳಗಳನ್ನು ಲಖನೌ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)

ವಿಶ್ವದಲ್ಲೇ ಬಲಿಷ್ಠ ತಂಡ ಕಟ್ಟಲು AI ಮೊರೆ ಹೋದ ಪಾಕ್​! ಚಾಂಪಿಯನ್ಸ್​ ಟ್ರೋಫಿಗೆ PCB ಮೆಗಾ ಪ್ಲಾನ್​

ತಾನೇ ಮುಂದೆ ನಿಂತು ಪತಿಗೆ 2ನೇ ಮದುವೆ ಮಾಡಿಸಿದ ಪತ್ನಿ! ಕಾರಣ ತಿಳಿದ್ರೆ ನಿಮ್ಮ ಹುಬ್ಬೇರುವುದು ಖಚಿತ

ಅವರೆಲ್ಲ ನನ್ನಿಂದ ಅದನ್ನೇ ಬಯಸಿದ್ದರು! ಕಹಿ ಕ್ಷಣವನ್ನು ನೆನೆದು ಕಣ್ಣೀರಿಟ್ಟ ನಟಿ ಕೃತಿ ಶೆಟ್ಟಿ

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…