RCB ನಾಯಕನಾಗಿ ರಜತ್​ ನೇಮಕಗೊಂಡ ಹಿಂದಿದೆ ಈ ಏಳು ಕಾರಣಗಳು; ವಿವರ ಕೇಳಿ ಈ ಸಲ ಕಪ್ ನಮ್ದೆ ಎಂದ ಫ್ಯಾನ್ಸ್​

Rajat Patidar

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ (RCB) ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ಫ್ರಾಂಚೈಸಿ ತೆರೆ ಎಳೆದಿದ್ದು, ಮಧ್ಯಪ್ರದೇಶದ ಮೂಲದ ಸ್ಫೋಟಕ ಆಟಗಾರ ರಜತ್​​ ಪಾಟಿದಾರ್​ಗೆ (Rajat Patidar) ಕ್ಯಾಪ್ಟನ್ಸಿ ಪಟ್ಟವನ್ನು ನೀಡಿದೆ. ಈ ಮೊದಲು ವಿರಾಟ್​ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುತ್ತದೆ ಎಂದು ಊಹಿಸಲಾಗಿತ್ತಾದರು ಅಂತಿಮವಾಗಿ ಫ್ರಾಂಚೈಸಿ ಯುವ ಹಾಗೂ ಅನುಭವಿ ಆಟಗಾರನಿಗೆ ಮಣೆ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.

ಇನ್ನೂ ಆರ್​ಸಿಬಿ (RCB) ನೂತನ ನಾಯಕನ ಆಯ್ಕೆ ಹಿಂದೆ ಹಲವು ಕಾರಣಗಳು ಅಡಗಿದ್ದು, ಪ್ರಮುಖವಾಗಿ ಏಳು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. 20222ರಿಂದಲೂ ಆರ್​ಸಿಬಿ ಭಾಗವಾಗಿರುವ ರಜತ್​ ತಮ್ಮ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಫ್ಯಾನ್ಸ್​ಗೆ ಅಚ್ಚುಮೆಚ್ಚಾಗಿದ್ದಾರೆ. ರಜತ್ ಆಯ್ಕೆ ಹಿಂದೆ ಏಳು ಕಾರಣಗಳನ್ನು ಉಲ್ಲೇಖಿಸಲಾಗಿದ್ದು, ಅಭಿಮಾನಿಗಳ ಆಸೆಯನ್ನು ಸಾಕಾರಗೊಳಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ಮಧ್ಯಪ್ರದೇಶ ಮೂಲದ 31 ವರ್ಷದ ರಜತ್​ ಪಾಟಿದಾರ್​ ಇತ್ತೀಚೆಗೆ ದೇಶೀಯ ಟಿ20 ಕ್ರಿಕೆಟ್​ ಟೂರ್ನಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ತಂಡದ ನಾಯಕರಾಗಿ ಫೈನಲ್​ಗೇರಿಸಿದ್ದರು. ಅಲ್ಲದೆ ಬ್ಯಾಟಿಂಗ್​ನಲ್ಲೂ ಮಿಂಚಿ 428 ರನ್​ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ರನ್​ ಸ್ಕೋರರ್​ ಆಗಿದ್ದರು. ಅಲ್ಲದೇ, ಕಳೆದ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಪರ ಪಾಟೀದರ್​ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ರಜತ್​ ಪಾಟಿದಾರ್​, ಆರ್​ಸಿಬಿ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದರು. ಅಂತಿಮವಾಗಿ ಫ್ರಾಂಚೈಸಿ (RCB) ಅವರನ್ನೇ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆ ಹಿಂದಿನ ಕಾರಣಗಳು ಹೀಗಿವೆ

  1.  ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕನಾಗಿ ಸಕ್ಸಸ್
  2.  ರಜತ್​ ನಾಯಕತ್ವದಲ್ಲಿ 10 ಪಂದ್ಯಗಳಲ್ಲಿ ಮಧ್ಯ ಪ್ರದೇಶ 8 ಪಂದ್ಯ ಗೆಲುವು
  3.  ಹೈ-ಫ್ರೆಷರ್ ಗೇಮ್​ಗಳಲ್ಲಿ ರಜತ್​ಗಿದೆ ಬಿಗ್ ಇನ್ನಿಂಗ್ಸ್​ ಕಟ್ಟಬಲ್ಲ ಸಾಮರ್ಥ್ಯ
  4.  ಬೌಲಿಂಗ್ ಚೇಂಜ್‌, ಫೀಲ್ಡಿಂಗ್‌ ಅಡ್ಜಸ್ಟ್​ಮೆಂಟ್​ನಲ್ಲಿ ನಾಯಕತ್ವದ ಚಾಣಾಕ್ಷತೆ
  5.  ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಪಾಟಿದಾರ್​ ಮ್ಯಾಚ್ ವಿನ್ನಿಂಗ್ ಆಟ
  6.  ಕೂಲ್ ಅಂಡ್ ಕಾಮ್, ಎಲ್ಲರೊಂದಿಗೆ ಬೆರೆಯುವ ಗುಣ ರಜತ್​ಗೆ ಇದೆ
  7.  ಆರ್​ಸಿಬಿ ತಂಡದ ಕಲ್ಚರ್​ ಬಗ್ಗೆ ರಜತ್​ ಪಾಟಿದಾರ್​ಗೆ ಅರಿವು

ಸೈಲೆಂಟಾಗಿ ಎಂಗೇಜ್​​ಮೆಂಟ್ ಮಾಡಿಕೊಂಡ Urfi Javed; ಫೋಟೋ ಲೀಕ್​

ವಿರಾಟ್​ಗೆ ನಾಯಕತ್ವದ ಅಗತ್ಯವಿಲ್ಲ; ರಜತ್ RCB ಕ್ಯಾಪ್ಟನ್ ಆದ ಬೆನ್ನಲ್ಲೇ ಫ್ರಾಂಚೈಸಿ ಡೈರೆಕ್ಟರ್ ಹೇಳಿಕೆ ವೈರಲ್​

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…