ವಿರಾಟ್​ಗೆ ನಾಯಕತ್ವದ ಅಗತ್ಯವಿಲ್ಲ; ರಜತ್ RCB ಕ್ಯಾಪ್ಟನ್ ಆದ ಬೆನ್ನಲ್ಲೇ ಫ್ರಾಂಚೈಸಿ ಡೈರೆಕ್ಟರ್ ಹೇಳಿಕೆ ವೈರಲ್​

Virat Kohli

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ಫ್ರಾಂಚೈಸಿ ತೆರೆ ಎಳೆದಿದ್ದು, ಸ್ಫೋಟಕ ಆಟಗಾರ ರಜತ್​​ ಪಾಟಿದಾರ್​ಗೆ ಕ್ಯಾಪ್ಟನ್ಸಿ ಪಟ್ಟವನ್ನು ನೀಡಿದೆ. ಇನ್ಣೂ ಈ ಮೊದಲು ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ (RCB) ನಾಯಕನಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತಾದರಾದರೂ ಫ್ರಾಂಚೈಸಿ ಅಂತಿಮವಾಗಿ ರಜತ್​ಗೆ ಕ್ಯಾಪ್ಟನ್ಸಿಯನ್ನು ನೀಡುವ ಮೂಲಕ ಆರ್​ಸಿಬಿ ತಂಡವನ್ನು ಮುನ್ನಡೆಸುವವರು ಯಾರು ಎಂಬುದನ್ನು ಸ್ಪಷ್ಟಪಡಿಸಿದೆ.

ಇನ್ನೂ ರಜತ್ ಪಾಟಿದಾರ್​ರನ್ನು ನಾಯಕನನ್ನಾಗಿ ನೇಮಿಸಿರುವ ಕುರಿತು ಮಾತನಾಡಿರುವ ಆರ್​ಸಿಬಿ (RCB) ತಂಡದ ನಿರ್ದೇಶಕ ಮೋ ಬೊಬಾಟ್​ ವಿರಾಟ್ ನಾಯಕತ್ವದ ಪಟ್ಟಕ್ಕೆ ಒಂದು ಆಪ್ಷನ್ ಆಗಿದ್ದರು ಎಂದು ಹೇಳಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಬೊಬಾಟ್, ನಾಯಕತ್ವದ ವಿಚಾರಕ್ಕೆ ಬರುವುದಾದರೆ ವಿರಾಟ್ ನಮಗೆ ಆಪ್ಷನ್ ಆಗಿದ್ದರು ಅಷ್ಟೇ. ಮೊದಲಿಗೆ ಬಹತೇಕ ಜನರು ವಿರಾಟ್​ಗೆ ನಾಯಕತ್ವ ಪಟ್ಟ ವಹಿಸಲಾಗುವುದು ಎಂದು ಭಾವಿಸಿ ಆತನ ಕಡೆಗೆ ವಾಲಿದ್ದರು. ಆದರೆ, ವಿರಾಟ್​ಗೆ ಯಾವುದೇ ನಾಯಕತ್ವದ ಪಟ್ಟ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. 

ನಾವೆಲ್ಲರೂ ನೋಡಿದಂತೆ, ನಾಯಕತ್ವವು ಅವರ ಅತ್ಯಂತ ಪ್ರಬಲ ಪ್ರವೃತ್ತಿಗಳಲ್ಲಿ ಒಂದಾಗಿದೆ. ಅದು ಅವರಿಗೆ ಸ್ವಾಭಾವಿಕವಾಗಿ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಏನೇ ಆಗಿರಲಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ. ರಜತ್ ಬಗ್ಗೆಯೂ ಅಭಿಮಾನಿಗಳಲ್ಲಿ ಕ್ರೇಜ್ ಇರುವುದನ್ನು ನಾವು ನೋಡಿದ್ದೇವೆ. 

ನಾನು ಹಾಗೂ ಕೋಚ್ ಆ್ಯಂಡಿ ಫ್ಲವರ್​ ನಾಯಕನ ಆಯ್ಕೆ ವಿಚಾರವಾಗಿ ತುಂಬಾ ಯೋಚಿಸಿದೆವು. ವಿರಾಟ್​ ಜೊತೆ ಈ ಬಗ್ಗೆ ಚರ್ಚಿಸಿದಾಗ ಅವರು ರಜತ್ ಹೆಸರು ಹೇಳುತ್ತಿದ್ದಂತೆ ತುಂಬಾ ಖುಷಿಪಟ್ಟರು. ಈ ಸ್ಥಾನಕ್ಕೆ ರಜತ್ ಎಷ್ಟು ಅರ್ಹರು ಎಂಬುದು ನಮಗೆ ತುಂಬಾ ಚೆನ್ನಾಗಿ ತಿಳಿದಿದೆ. ವಿರಾಟ್ ತಂಡದಲ್ಲಿರುವುದರಿಂದ ರಜತ್ ಸುರಕ್ಷಿತ ಕೈಗಳಲ್ಲಿ ಇದ್ದಾರೆ ಎಂದು ಆರ್​ಸಿಬಿ (RCB) ತಂಡದ ನಿರ್ದೇಶಕ ಮೋ ಬೊಬಾಟ್​ ಹೇಳಿದ್ದಾರೆ.

ಡಾಲಿ Dhananjay ಮದುವೆಗೆ ವಿಭಿನ್ನವಾಗಿ ಶುಭಕೋರಿದ ಅಂಚೆ ಇಲಾಖೆ; ನಿಮ್ಮ ಪ್ರೀತಿಗೆ ಶರಣು ಎಂದ ಮಧುಮಗ

ಶಿಕ್ಷಕಿ ಎದುರೇ ಕೇಕ್ ಕತ್ತರಿಸಿ ತರಗತಿಯಲ್ಲೇ Beer ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ತನಿಖೆಗೆ ಆದೇಶ, ವಿಡಿಯೋ ವೈರಲ್​

Share This Article

ಈ ಬೇಸಿಗೆಯಲ್ಲಿ ಈ 5 ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ! ಆರೋಗ್ಯವಾಗಿರಿ… summer health

 summer health : ಬದಲಾಗುತ್ತಿರುವ ಋತುಗಳಿಗೆ ಅನುಗುಣವಾಗಿ ನಿಮ್ಮ ದೇಹವನ್ನು ಸದೃಢವಾಗಿಡಲು, ನಿಮ್ಮ ಆಹಾರಕ್ರಮದಲ್ಲಿ ಆರೋಗ್ಯಕರ…

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…

ಈ 3 ರಾಶಿಯಲ್ಲಿ ಜನಿಸಿದವರನ್ನು ಶಾಂತಿಯ ಪ್ರತಿರೂಪ ಎಂದು ಹೇಳಲಾಗುತ್ತೆ! ನೀವು ಯಾವ ರಾಶಿಯವರು? Zodiac Signs

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ…