ಜಯನಗರ ವಿನಾಯಕಸ್ವಾಮಿ ದೇವಾಲಯದಲ್ಲಿ48ನೇ ವಾರ್ಷಿಕೋತ್ಸವ; ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

blank

ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿರುವ ಶ್ರೀವಿನಾಯಕ ಸ್ವಾಮಿ ದೇವಾಲಯದಲ್ಲಿ 48ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

blank

ಭಾನುವಾರದಿಂದ ಆರಂಭವಾಗಿರುವ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರದವರೆಗೆ ನಡೆಯಲಿದ್ದು, ಸೋಮವಾರ ಮೂಲ ದೇವರ ಮೂರ್ತಿ ಅಷ್ಟಬಂಧ ಪ್ರತಿಷ್ಠಾಪನೆ, ನಾಗದೇವತೆಗಳಿಗೆ ಅಭಿಷೇಕ ಪೂಜೆ ನಡೆಯಿತು. ಇಂದು (ಮಂಗಳವಾರ) ಬೆಳಗಿನ ಜಾವ 48 ಸಂವತ್ಸರಗಳ ಪ್ರತಿಷ್ಠಾ ಕಳಸ ಸ್ಥಾಪನೆ ಹಾಗೂ ಮಧ್ಯಾಹ್ನ ಏಕಾದಶ ರುದ್ರಹೋಮ ಏರ್ಪಡಿಸಲಾಗಿದೆ. ಸಂಜೆ 7 ಗಂಟೆಗೆ ಸೂರ್ಯ ಆರ್ಟ್ಸ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜಯನಗರ ವಿನಾಯಕಸ್ವಾಮಿ ದೇವಾಲಯದಲ್ಲಿ48ನೇ ವಾರ್ಷಿಕೋತ್ಸವ; ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಮೇ 21 (ಬುಧವಾರ) ರಂದು ವಿಶ್ವಶಾಂತಿಗಾಗಿ ಸಂಕಲ್ಪ ಮಾಡಿ ವಿನಾಯಕ ಸ್ವಾಮಿಗೆ ಶಾಂತಿಪೂಜೆ ಹಾಗೂ ಹೋಮ ನಡೆಸಲಾಗುವುದು. ಮೇ22 (ಗುರುವಾರ) ವಿಶೇಷವಾಗಿ 1008 ಲೀ. ಹಾಲು, 108 ಲೀ ಮೊಸರು, 108 ಕೆ.ಜಿ.ತುಪ್ಪ ಮತ್ತು ಜೇನುತುಪ್ಪ ಹಾಗೂ 108 ಬಗೆಯ ಹಣ್ಣಿನ ರಸಗಳಿಂದ ದೇವರಿಗೆ ಅಭಿಷೇಕ ಪೂಜೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿಯೊಂದಿಗೆ ಪೂಜೆ ಸಂಪನ್ನಗೊಳ್ಳಲಿದ್ದು, 10 ಸಾವಿರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಪ್ರಧಾನ ಅರ್ಚಕರಾದ ಶ್ರೀಚನ್ನವೀರ ದೇವರು ತಿಳಿಸಿದ್ದಾರೆ.

ನಾಡೋಜ ನ್ಯಾ. ಎಸ್.ಆರ್.ನಾಯಕ್ ವಿಧಿವಶ; ಸೋಮವಾರ ಅಂತಿಮ ಸಂಸ್ಕಾರ

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank