More

    ಮದ್ವೆ ಶಾಪಿಂಗ್​ ಮುಗಿಸಿ ಮನೆಗೆ ಬರ್ತಿದ್ದ ಮೂವರು ಸ್ನೇಹಿತರಿಗೆ ಜವರಾಯನಂತೆ ಬಂದ ಪೊಲೀಸ್​ ವಾಹನ!

    ಚಂಡೀಗಢ: ಹರಿಯಾಣದ ಕರ್ನಲ್​ ಜಿಲ್ಲೆಯ ಮರ್ದನ್ಹೇರಿ ಗ್ರಾಮದ ಅಸ್ಸಾಂಧ್​-ಕೈಥಲ್​ ರಸ್ತೆಯಲ್ಲಿ ಪೊಲೀಸ್​ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ನೇಹಿತರು ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರು ಘಟನೆ ನಡೆದಿದ್ದು, ಇಬ್ಬರು ಪೊಲೀಸ್​ ಸಿಬ್ಬಂದಿಯು ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೃತರನ್ನು ಜಿಂದ್​ ಜಿಲ್ಲೆಯ ಸಫಿದಾನ್ ಪಟ್ಟಣದ ಪ್ರಯಾಗ್​ (20) ಮತ್ತು ಕಾರ್ತಿಕ್​ (26) ಹಾಗೂ ಕೈಥಲ್​ನ ಡಿಯೋರಾ ಗ್ರಾಮದ ಸವಿಂದರ್​ ಸಿಂಗ್​ (32) ಎಂದು ಗುರುತಿಸಲಾಗಿದೆ. ಗಾಯಾಳು ಪೇದೆಗಳಾದ ವೇದ್​ ಪ್ರಕಾಶ್​ ಮತ್ತು ಸಮಿತ್​ ಕುಮಾರ್​ಗೆ ಚಿಕಿತ್ಸೆ ಮುಂದುವರಿದಿದೆ. ​

    ಇದನ್ನೂ ಓದಿ: ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…

    ಮೂಲಗಳ ಪ್ರಕಾರ ಡಿಸೆಂಬರ್​ 25ರಂದು ಸವಿಂದರ್​ ಸಿಂಗ್​ಗೆ ಮದುವೆ ನಿಶ್ಚಯವಾಗಿತ್ತು. ಮೂವರು ಸ್ನೇಹಿತರು ಮದುವೆ ಶಾಪಿಂಗ್​ ಮುಗಿಸಿ ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಕಾರಿಗೆ ಎದುರಾದ ಪೊಲೀಸ್​ ವಾಹನವು ಇತ್ತೀಚೆಗೆ ಕೈಥಾಲ್​ನಿಂದ ಪಾಣಿಪತ್​ಗೆ ವರ್ಗಾವಣೆಯಾದ ಪೊಲೀಸ್​ ವರಿಷ್ಠಾಧಿಕಾರಿ ಶಶಾಂಕ್​ ಕುಮಾರ್​ರನ್ನು ಬರಮಾಡಿಕೊಳ್ಳಲು ತೆರಳುತ್ತಿತ್ತು.

    ಟ್ರ್ಯಾಕ್ಟರ್​ ಟ್ರೈಲರ್​ ಇದ್ದಕ್ಕಿದ್ದಂತೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಜೋರಾಗಿ ಬ್ರೇಕ್​ ಹಾಕಿದರೂ ಪೊಲೀಸ್​ ವಾಹನ ಕೊನೆಗೆ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಎಲ್ಲರಂಥಲ್ಲ ಈ ವೈದ್ಯೆ: 10 ರೂಪಾಯಿ ಕೊಟ್ಟರೆ ಸಾಕು, ಕಾಯಿಲೆಗಳೆಲ್ಲವೂ ವಾಸಿ!

    ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts