ಮುಂಬೈ: ಕೆಲವರು ತಮಗೆ ತಾವೇ ವಿಚಿತ್ರವಾಗಿ ಅಂತ್ಯ ಹೇಳಿಕೊಳ್ಳುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಲ್ಲೊಂದು ಕಡೆ ನಡೆದಿದ್ದು, ಯುವಕನೊಬ್ಬ ತನಗೇ ತಾನೇ ವಾಟ್ಸ್ಆ್ಯಪ್ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿಕೊಂಡಿದ್ದ. ವಿಚಿತ್ರವೆಂದರೆ ಆತ ಹಾಗೆ ಸ್ಟೇಟಸ್ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ ಆತನ ಶವ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನೇರಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಇನ ರಿಷಿಕೇಶ್ ದಿಲಿಪ್ ಖೊಡ್ಪೆ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಟುಂಬಸ್ಥರ ಜತೆ ನೆಲೆಸಿದ್ದ ಈತ ಶನಿವಾರ ರಾತ್ರಿ 9ರ ಹಾಗೆ ಮೂಡ್ ಆಫ್ ಅಂತ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ.
ಮರುದಿನ ತನಗೆ ತಾನೇ ಶ್ರದ್ಧಾಂಜಲಿ ಹೇಳಿಕೊಳ್ಳವಂತೆ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಈತ, ನಂತರ ತನ್ನ ಕಸಿನ್ ಪ್ರದೀಪ್ ಖೊಡ್ಪೆಗೆ ಕರೆ ಮಾಡಿ, ನಿನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದ. ಎಲ್ಲಿದ್ದಿಯಾ ಎಂದು ಪ್ರದೀಪ್ ಕೇಳಿದಾಗ ಗೋರಖ್ ಬಾಬಾ ಫಾರ್ಮ್ನಲ್ಲಿದ್ದೇನೆ ಎಂದಿದ್ದ. ಕೂಡಲೇ ಪ್ರದೀಪ್ ಅಲ್ಲಿಗೆ ಹೋದರೆ ಅಲ್ಲಿನ ಮರವೊಂದರಲ್ಲಿ ರಿಷಿಕೇಶ್ ನೇಣು ಹಾಕಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!
ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್ ಮಾಡಿದ್ಲು!