More

    ಕೆರೆಗೆ ಬಿದ್ದು ಯುವತಿ ಸಾವು: ಫಾರ್ಮ್​ ಮಾಲಿಕರ ಮೇಲೆ ಪೊಲೀಸ್ ಕೇಸ್​

    ಬಂಟ್ವಾಳ: ಕೃಷಿ ಅಧ್ಯಯನಕ್ಕೆಂದು ಬಂದಿದ್ದ ಯುವತಿ ಕೆರೆಗೆ ಬಿದ್ದು ಮೃತಪಟ್ಟಿದ್ದ ಪ್ರಕರಣದಲ್ಲಿ ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಫಾರ್ಮ್​ನ ಮಾಲೀಕರ ಮೇಲೆ ಕ್ರಿಮಿನಲ್​​ ಕೇಸು ದಾಖಲಾಗಿದೆ.

    ಮೈಝಿ ಕರೋಲ್ ಫೆರ್ನಾಂಡೀಸ್ ಎಂಬಾಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ವಾರಣಾಸಿ ಫಾರ್ಮ್​ಗೆ ಬಂದಿದ್ದ ಸಂದರ್ಭದಲ್ಲಿ ಕಳೆದ ಸೆ.12 ರಂದು ಕೆರೆಗೆ ಬಿದ್ದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಈ ಮುನ್ನ ಈಜು ತರಬೇತುದಾರರ ನಿರ್ಲಕ್ಷ್ಯ ಎಂದು ದೂರು ದಾಖಲಾಗಿತ್ತು. ಇದೀಗ ವಾರಣಾಸಿ ಫಾರ್ಮ್​ನ ಪಾರ್ಥಾ ವಾರಣಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದು ಯುವತಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

    ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

    VIDEO| ಆಕಾಶದಲ್ಲಿ ಕಾಣಿಸಿಕೊಂಡ ಹತ್ತಿ ಉಂಡೆಗಳು! ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts