More

    ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

    ನವದೆಹಲಿ: ದಿನದಿಂದ ದಿನಕ್ಕೆ ಕರೊನಾ ಸೋಂಕಿನ ಮತ್ತೊಂದು ಬೃಹತ್​ ಅಲೆಯ ಸಾಧ್ಯತೆ ಕ್ಷೀಣಿಸುತ್ತಿದೆ. ಮೊದಲೆರಡು ಅಲೆಗಳ ಪ್ರಮಾಣದ ಮೂರನೇ ಅಲೆಯನ್ನು ಭಾರತದಲ್ಲಿ ನೋಡುತ್ತೇವೆ ಅನ್ನಿಸುತ್ತಿಲ್ಲ ಎಂದು ಏಮ್ಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.

    ಅವರು ಮಂಗಳವಾರ ಐಸಿಎಂಆರ್​ನ ಡೈರೆಕ್ಟರ್​ ಜನರಲ್ ಡಾ.ಬಲರಾಂ ಭಾರ್ಗವ ಬರೆದಿರುವ ‘ಗೋಯಿಂಗ್​ ವೈರಲ್: ಮೇಕಿಂಗ್​ ಆಫ್ ಕೋವಾಕ್ಸಿನ್​ – ದ ಇನ್​ಸೈಡ್​ ಸ್ಟೋರಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ತೀವ್ರ ಮಟ್ಟದ ಸೋಂಕು ಮತ್ತು ಆಸ್ಪತ್ರೆಗೆ ಸೇರುವಂತಹ ಸ್ಥಿತಿಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯುತ್ತದೆ ಎಂದರು.

    ಇದನ್ನೂ ಓದಿ: ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ ಮನೆಗೆ ಎಸಿಬಿ ದಾಳಿ

    “ಲಸಿಕೆಯ ರೂಪದಲ್ಲಿ ನಮಗೆ ಉತ್ತಮ ರಕ್ಷಣೆ ಸಿಕ್ಕಿದೆ. ಹೆಚ್ಚು ಹೆಚ್ಚು ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆಯುವಂತೆ ಗಮನಹರಿಸಬೇಕು. ಸೋಂಕು ಪ್ರಕರಣದಲ್ಲಿ ಏರಿಕೆಯಿಲ್ಲದ್ದರಿಂದ ಸದ್ಯಕ್ಕೆ ಲಸಿಕೆಯ ಬೂಸ್ಟರ್​ ಡೋಸ್ ಅಥವಾ ಮೂರನೇ ಡೋಸ್​ನ ಅವಶ್ಯಕತೆಯೂ ಇಲ್ಲ” ಎಂದು ಗುಲೇರಿಯ ಹೇಳಿದ್ದಾರೆ.

    ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ಮಾತನಾಡಿ, ಎಲ್ಲ ಅರ್ಹ ಜನಸಂಖ್ಯೆಗೆ ಮೊದಲನೇ ಮತ್ತು ಎರಡನೇ ಡೋಸ್​ ಕರೊನಾ ಲಸಿಕೆ ನೀಡುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ. “ಸಾಂಕ್ರಾಮಿಕ ರೋಗವು ಮುಗಿದಿಲ್ಲ ಮತ್ತು ಸದ್ಯಕ್ಕೆ ಅದು ಅಂತ್ಯಗೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ಹರಡುವ ರೋಗದ ರೂಪವನ್ನು ತಲುಪಬಹುದು… ಈಗ ಆರೋಗ್ಯ ಮೂಲಸೌಕರ್ಯದ ವಿಚಾರದಲ್ಲಿ ನಾವು ಉತ್ತಮವಾಗಿ ಸಜ್ಜಾಗಿದ್ದೇವೆ. ಆದರೆ, ಮೈಮರೆಯುವಂತಿಲ್ಲ, ಕೋವಿಡ್​ ಸೂಕ್ತ ನಡವಳಿಕೆಯನ್ನು ಮುಂದುವರೆಸಬೇಕು” ಎಂದು ಎಚ್ಚರಿಸಿದರು. (ಏಜೆನ್ಸೀಸ್)

    VIDEO| ಮದುವೆ ಹುಡುಗೀಗೆ ಶಿಳ್ಳೆ ಹೊಡೆದು ಸ್ವಾಗತಿಸಿದ ‘ರಾಜಕುಮಾರ’!

    ಸಿಧುವಿನಿಂದಾಗಿ ನನ್ನ ಕ್ಷೇತ್ರವನ್ನು ಬಿಡುವುದಿಲ್ಲ! ಚುನಾವಣಾ ಕಣವನ್ನು ಘೋಷಿಸಿದ ಕ್ಯಾಪ್ಟನ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts