blank

23ರಂದು ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ – ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಸತೀಶ್ ಕುಂಪಲ ಮಾಹಿತಿ

blank

 

ಪುತ್ತೂರು: ಕಲ್ಲು, ಮರಳು ಸಿಗದೆ ಬಡವರು ತೀವ್ರ ತೊಂದರೆಗೊಳಗಾಗಿದ್ದಾರೆ. ಅಕ್ರಮ ಸಕ್ರಮ ಅರ್ಜಿಗೆ ಅನುಗುಣವಾಗಿ ವಿಲೇವಾರಿಯಾಗುತ್ತಿಲ್ಲ. ಆಶ್ರಯ ಯೋಜನೆಯ ಮನೆ ಬಡವರಿಗೆ ನೀಡುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿಯನ್ನು ಖಂಡಿಸಿ ಜೂನ್ 23ರಂದು ಸ್ಥಳಿಯಾಡಳಿತದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಕಲ್ಲೇಗದಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಕಸಿತ ಭಾರತ ಸಂಕಲ್ಪ ಕುರಿತು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು, ಸಂಕಲ್ಪದಿಂದ ಸಾಧನೆಯ ತನಕ ಕುರಿತು ವಿಕಸಿತ ಭಾರತ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಮುಂದಿನ ಕಾರ್ಯಯೋಜನೆ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಸಹ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ ಪ್ರತಿಜ್ಞಾ ವಿಧಿ ನಡೆಸಿದರು.

ನಗರ ಮಂಡಲ ಅಧ್ಯಕ್ಷ ಶಿವಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಪ್ರಮುಖರಾದ ಅನಿತ್ ತೆಂಕಿಲ, ಉಮೇಶ್ ಕೋಡಿಬೈಲು, ಆರ್.ಸಿ.ನಾರಾಯಣ, ಪ್ರಸನ್ನ ಮಾರ್ತ, ಸೀತಾರಾಮ ಬೆಳಾಲು, ಮೋಹನ್ ಪಿ.ಎಸ್. ಉಪಸ್ಥಿತರಿದ್ದರು.
ವಿಭಾಗ ಸಹ ಸಂಚಾಲಕ ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿದರು. ಕುಮಾರ್ ನರಸಿಂಹ ಭಟ್, ಸುನೀಲ್ ದಡ್ಡು ನಿರೂಪಿಸಿದರು. ವಿಟ್ಲ ಮುಡ್ನೂರು ಗ್ರಾಪಂ ಅಧ್ಯಕ್ಷ ಪುನಿತ್ ಮಾಡತ್ತಾರು ವಂದಿಸಿದರು.

Share This Article

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…

ಈರುಳ್ಳಿ ಕತ್ತರಿಸುವಾಗ ಹೀಗೆ ಮಾಡಿದರೆ ಕಣ್ಣೀರೇ ಬರುವುದಿಲ್ಲ..ನೀವೂ ಒಮ್ಮೆ ಟ್ರೈ ಮಾಡಿ | Onions

Onions: ಈರುಳ್ಳಿ ಕತ್ತರಿಸುವುದು ಅನೇಕರಿಗೆ ಕಷ್ಟದ ಕೆಲಸವಾಗಿದೆ. ಕೆಲವರು ಯಾವುದೇ ಸಮಸ್ಯೆಯಿಲ್ಲದೆ ಈರುಳ್ಳಿಯನ್ನು ಕತ್ತರಿಸಿದರೆ, ಇತರರು…